ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ನಾಗನಕಟ್ಟೆಗಳಲ್ಲಿ (ನಾಳೆ)ಜು.29ರಂದು ನಾಗರ ಪಂಚಮಿ ನಡೆಯಲಿದೆ.















ದೇಗುಲದ ಸಮೀಪದ ನಾಗನ ಕಟ್ಟೆಯಲ್ಲಿ ಪೂರ್ವಾಹ್ನ ಗಂಟೆ 9 ರಿಂದ ಮತ್ತು ಗರಡಿ ಬೈಲು ಮೂಲ ನಾಗನಕಟ್ಟೆಯಲ್ಲಿ ಪೂರ್ವಾಹ್ನ ಗಂಟೆ 11 ರಿಂದ ಪೂಜೆ ನಡೆಯಲಿದೆ.
ಆ ಪ್ರಯುಕ್ತ ತಂಬಿಲ ಸೇವೆ, ಕ್ಷೀರಾಭಿಷೇಕ , ಪಂಚಾಮೃತ ಅಭಿಷೇಕ, ಎಳನೀರು ಅಭಿಷೇಕ, ಹಣ್ಣುಕಾಯಿ ಸೇವೆಗಳು ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










