ಮಾತೆಯರಂತೆ ಪ್ರೀತಿಯನ್ನು ಹಂಚುತ್ತಾ ದೇಶ ಸೇವೆಗಾಗಿ ಮನೆ ಮಠವನ್ನು ತ್ಯಜಿಸಿ ತಮ್ಮ ಬದುಕನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟ ಕ್ರೈಸ್ತ ಸನ್ಯಾಸಿನಿಯರನ್ನು ಅಪ್ಪಟ ಸುಳ್ಳು ಆಪಾದನೆಯನ್ನು ಹೊರಿಸಿ ಕಳೆದ ಐದಾರು ದಿನಗಳಿಂದ ಜೈಲಿನಲ್ಲಿ ಬಂಧಿಸಿಟ್ಟಿರುವುದು ಖಂಡನೀಯ. ಈ ಕ್ರಮ ಭಾರತೀಯತೆಯ ಮೌಲ್ಯಗಳಿಗೆ ಕಂಳಕ ತರುವಂತದ್ದಾಗಿರುತ್ತದೆಈ ಘಟನೆಯಿಂದಾಗಿ ಜಗತ್ತಿನೆದುರು ಭಾರತ ತಲೆತಗ್ಗಿಸುವಂತಾಗಿದೆ.















ಗುಂಪು ಅತ್ಯಾಚಾರದ ಆರೋಪಿಗಳು ಜೈಲಿನಿಂದ ಬಿಡುಗಡೆಯಾದಾಗ ಅಂತಹವರಿಗೆ ಹಾರ ತುರಾಯಿಗಳೊಂದಿಗೆ ಸ್ವಾಗತ ಕೋರುವ ಕೆಲವು ಮನುಷ್ಯತ್ವರಹಿತ ಕೋಮುವಾದೀ ಸಂಘಟನೆಗಳ ಸುಳ್ಳು ಆಪಾಧನೆಗಳನ್ನು ಮಾನ್ಯ ಮಾಡಿ ಭಾರತದಲ್ಲಿ ಈವರೆಗೆ ಕೋಟ್ಯಾಂತರ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ ಆಸ್ಪತ್ರೆಗಳಲ್ಲಿ ಪ್ರೀತಿಯ ಅಪ್ಪುಗೆಯೊಂದಿಗೆ ಚಿಕಿತ್ಸಾ ಸೇವೆ ನೀಡುತ್ತಿರುವ ಕ್ರೈಸ್ತ ಸನ್ಯಾಸಿಗಳ ಮೇಲೆ ಉಗ್ರವಾದಿಗಳ ಮೇಲೆ ಬಳಸುವ ಎನ್ಐಎ ಗೆ ಸಂಭಂಧಿಸಿದ ಅಕ್ರಮ ಮಾನವ ಸಾಗಾಟದ ಕಠಿಣ ಸೆಕ್ಷನ್ ಹೊರಿಸಿ ಬಡಪಾಯಿ ಕ್ರೈಸ್ತ ಭಗಿನಿಯರೊಂದಿಗೆ ಯಾವದೋ ಘನಘೋರ ಅಪರಾಧ ಮಾಡಿದವರೊಂದಿಗೆ ವ್ಯವಹರಿಸುವಂತೆ ವ್ಯವಹರಿಸಿ ಜೈಲಿಗಟ್ಟಿದ್ದು ಅಕ್ಷಮ್ಯ. ಮಾತ್ರವಲ್ಲ ಏನೋ ದೊಡ್ಡ ಸಾಹಸ ಮಾಡಿದವರಂತೆ ಆಹ್ಲಾದ ವ್ಯಕ್ತಪಡಿಸುತ್ತಿರುವುದು ದೇಶದ ಸೌಹಾರ್ಧಯುತ ಬದುಕಿಗೆ ಕಳಂಕ ತರುವಂತದ್ದಾಗಿದೆ.
ಇದು ಆಡಳಿತದ ಕರಾಳ ಕೋಮು ಮುಖವನ್ನು ಮತ್ತೊಮ್ಮೆ ತೆರೆದಿಟ್ಟಿದೆ. ಈ ಕೃತ್ಯವು ಸಂವಿದಾನದತ್ತವಾಗಿ ಪ್ರಜೆಗಳಿಗೆ ನೀಡಲ್ಪಟ್ಟ ಸಂವಿಧಾನಬದ್ದ ಹಕ್ಕುಗಳ ಉಲ್ಲಂಘನೆಯೂ ಆಗಿದೆ.ಇದು ಬಿಜೆಪಿ ನೇತ್ರತ್ವದ ಕೇಂದ್ರ ಸರಕಾರ ಭಾರತೀಯ ಸಂವಿಧಾನವನ್ನು ಬಲಹೀನಗೊಳಿಸುತ್ತಿರುವುದರ ಲಕ್ಷಣವೂ ಹೌದು. ಕ್ರೈಸ್ತರ ಈ ದೇಶದೊಂದಿಗಿನ ಸಂಭಂಧ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದು.ಒಂದು ವೇಳೆ ಕ್ರೈಸ್ತರ ಉದ್ದೇಶ ಒತ್ತಾಯದ ಮತಾಂತರವಾಗಿದ್ದಲ್ಲಿ ಇವತ್ತಿಗೆ ಈ ದೇಶದಲ್ಲಿ ಇರಬೇಕಾದ ಕ್ರೈಸ್ತರ ಸಂಖ್ಯೆ ಕೇವಲ ೨.೩೦ ಶೇಕಡಾ ಆಗಿರುತ್ತಿತ್ತೇ ? ಆರೋಪಗಳನ್ನು ಹೊರಿಸುವಾಗ ಅದು ಕನಿಷ್ಟ ನಂಬಿಕೆಗೆ ಅರ್ಹವಾಗಿರಬೇಕೆನ್ನುವ ಸಾಮಾನ್ಯ ಜ್ಞಾನವೂ ಇವರಿಗೆ ಇದ್ದಂತಿಲ್ಲ ಎಂದು ಜಾನಿ.ಕೆ.ಪಿ ಪತ್ರಿಕಾ ಹೇಳಿಕೆ ಮೂಲಕ ಖಂಡನೆ ವ್ಯಕ್ತಪಡಿಸಿರುತ್ತಾರೆ.










