














ಗಡಿ ಪ್ರದೇಶವಾದ ಕಲ್ಲಪ್ಪಳ್ಳಿಯ ಅನುಷಾ ಭಾಸ್ಕರ ಇವರು ತಿರುವನಂತಪುರಂ ನಲ್ಲಿ ನಡೆದ 69ನೇ ಕೇರಳ ಸ್ಟೇಟ್ ಜೂನಿಯರ್ ಅಥ್ಲೆಟಿಕ್ಸ್ ನಲ್ಲಿ ಹಾಮ್ಮರ್ ಥ್ರೋ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ, ಇವರು ಕಾಸರಗೋಡು ಜಿಲ್ಲೆಯಿಂದ ಪ್ರತಿನಿಧಿಸಿದ್ದು, ಇವರು ಯಸ್ ಡಿ ಯಂ ಕಾಲೇಜ್ ಉಜಿರೆ ಇಲ್ಲಿ ಓದುತ್ತಿದ್ದಾರೆ. ಇವರು ಕಲ್ಲಪ್ಪಳ್ಳಿ ಬಾಟೋಳಿ ದಿವಂಗತ ಶ್ರೀ ಭಾಸ್ಕರ ಮತ್ತು ಶ್ರೀಮತಿ ಪುಷ್ಪ ಇವರ ಪುತ್ರಿ.










