ಜಟ್ಟಿಪಳ್ಳದಿಂದ ಸುಳ್ಯ ಪೇಟೆಯ ಮೂಲಕ ಗಣಪತಿಯ ವೈಭವದ ಶೋಭಾಯಾತ್ರೆ
ಜಟ್ಟಿಪಳ್ಳ ಶ್ರೀ ರಾಮ ಭಜನಾ ಸೇವಾ ಸಂಘದ ವತಿಯಿಂದ 32 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಶ್ರೀ ಚೆನ್ನಕೇಶವ ದೇವರ ವಸಂತ ಕಟ್ಟೆಯಲ್ಲಿ ಆ.27 ರಂದು ನಡೆಯಲಿದೆ















ಬೆಳಿಗ್ಗೆ ಬ್ರಹ್ಮಶ್ರೀ ಪುರೋಹಿತ ಶ್ರೀ ನಾಗರಾಜ ಭಟ್ ಮತ್ತು ಬಳಗದವರಿಂದ ಗಣಪತಿ ಹವನ ಶ್ರೀ ಗಣೇಶ ಮೂರ್ತಿ ಪ್ರತಿಷ್ಠೆ ನಡೆಯಲಿದೆ.
ಬಳಿಕ ಸ್ಥಳೀಯ ಮಾನಸ ಮಹಿಳಾ ಮಂಡಲ ಸದಸ್ಯರಿಂದ ಭಜನಾ ಸಂಕೀರ್ತನೆಯು ನಡೆಯಲಿದೆ.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ
ಮಹಾಮಂಗಳಾರತಿ ಬಳಿಕ
ಸಂಜೆ ಗಣಪತಿಯ ವಿಜೃಂಭಣೆಯ ಶೋಭಾಯಾತ್ರೆಯು ಅಲಂಕೃತ ಮಂಟಪದಲ್ಲಿ ಜಟ್ಟಿಪಳ್ಳದಿಂದ ಹೊರಟು
ನಾವೂರು,ಗಾಂಧಿನಗರ, ಸುಳ್ಯ ಮುಖ್ಯ ರಸ್ತೆ ಮೂಲಕ ಸಾಗಿ ಶ್ರೀರಾಂ ಪೇಟೆ ಯಿಂದ ಜಟ್ಟಿಪಳ್ಳ, ಬೊಳಿಯಮಜಲು ರಸ್ತೆ ಮೂಲಕ ಬೊಳಿಯಮಜಲು ಕೊಡಿಯಾಲಬೈಲ್ ಕಂದಡ್ಕ ಹೊಳೆಯಲ್ಲಿ ಜಲಸ್ಥಂಭನಗೊಳ್ಳಲಿದೆ.










