ಜಾಲ್ಸೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 38 ನೇ ವರುಷದ ಶ್ರೀ ಗಣೇಶೋತ್ಸವ ವು ಆ.27 ರಂದು ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.















ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ನಡೆದು, 37 ನೇ ವರ್ಷದ ಗಣೇಶೋತ್ಸವ ವಿಗ್ರಹದಾನಿಗಳಾದ ಶ್ರೀಮತಿ ಯಶೋದ ಮಹಾಲಿಂಗನ್ ಧ್ವಜಾರೋಹಣಗೈಯ್ಯಲಿದ್ದಾರೆ.
ಬಳಿಕ 12 ತೆಂಗಿನಕಾಯಿ ಗಣಪತಿ ಹವನ ನಡೆದು ಗಣೇಶನ ಪ್ರತಿಷ್ಠೆ ನಡೆಯುವುದು. ಈ ಬಾರೀ ಎ.ಕೆ. ಬಾಲಗೋಪಾಲ ಎರ್ಮೆಕ್ಕಾರು ಹಾಗೂ ಮನೆಯವರು ಗಣೇಶನ ವಿಗ್ರಹ ದಾನಿಗಳಾಗಿ ಸಹಕರಿಸಿದ್ದಾರೆ.
ಬೆಳಗ್ಗೆ ಮಹಾಪೂಜೆ, ಪ್ರಸಾದ ವಿತರಣೆ, ಕ್ಷೇತ್ರ ಪಾಲಕ ನಾಗದೇವರಿಗೆ ನಾಗ ತಂಬಿಲ ನಡೆಯುವುದು. ಬೆಳಗ್ಗೆ 9 ರಿಂದ ಮಹಿಳೆಯರಿಗೆ ಹೂ ಕಟ್ಟುವ ಸ್ಪರ್ಧೆ, ಹಣತೆ ಉರಿಸುವ ಸ್ಪರ್ಧೆ ನಡೆಯುವುದು. ಸ್ಥಳೀಯ ಭಜಕರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯುವುದು.
ಅಪರಾಹ್ನ ಮಹಾಪೂಜೆ ಬಳಿಕ ಶೋಭಾಯಾತ್ರೆ ನಡೆಯುವುದು. ಜಾಲ್ಸೂರು, ಅಡ್ಕಾರು, ವಿನೋಬಾನಗರ, ಕೋನಡ್ಕಪದವು ರಸ್ತೆಯಾಗಿ ಸಾಗಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿ ಪಯಸ್ವಿನಿ ನದಿ ಕಿನಾರೆಯಲ್ಲಿ ಜಲಸ್ತಂಭನ ನಡೆಯುವುದು.
ಶೋಭಾಯಾತ್ರೆಯಲ್ಲಿ ವಿಶ್ವನಾಥ ಬಳವಂತಡ್ಕ ಅಡೂರ್ ಇವರ ಶಿಷ್ಯವೃಂದದವರಿಂದ ಕುಣಿತ ಭಜನೆ ನಡೆಯುವುದು.










