ದಫ್, ಸ್ಕೌಟ್,ಬೈತ್ ಸೇರಿದಂತೆ 30ಕ್ಕೂ ಹೆಚ್ಚು ಖ್ಯಾತ ಕಲಾ ತಂಡಗಳು ಭಾಗಿ
ಸುಳ್ಯ ತಾಲೂಕು ಮಿಲಾದ್ ಸಮಿತಿ ವತಿಯಿಂದ
ಬೃಹತ್ ಪ್ರವಾದಿ ಸಂದೇಶ ಕಾಲ್ನಡಿಗೆ ಜಾಥಾ ನಾಳೆ(ಸೆ.13) ರಂದು ಸುಳ್ಯದಲ್ಲಿ ನಡೆಯಲಿದ್ದು ಜಾಥಾದಲ್ಲಿ ಜಿಲ್ಲಾ ಮಟ್ಟದ ವಿವಿಧ ಭಾಗಗಳ ದಫ್ ತಂಡ, ಸ್ಕೌಟ್, ಕಳರಿ ಸೇರಿದಂತೆ 30 ಕ್ಕೂ ಹೆಚ್ಚು ಕಲಾ ಸಂಘಗಳು ಭಾಗವಹಿಸಲಿದೆ ಎಂದು ತಾಲೂಕು ಮಿಲಾದ್ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಿಲಾದ್ ಸಮಿತಿಯ ಸಂಚಾಲಕರಾದ ಕೆ.ಎಸ್.ಉಮ್ಮರ್ ರವರು ಮಾತನಾಡಿ
‘ಸಕಲ ಮನುಕುಲಕ್ಕೆ ಶಾಂತಿ, ದಯೆ, ಸಹಾನುಭೂತಿ ಹಾಗೂ ಸತ್ಯ ಜೀವನ ಶೈಲಿಯ ಬೆಳಕಾಗಿ ಬಂದವರು ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾರವರಾಗಿದ್ದಾರೆ. ಅವರ 1500ನೇ ಜನ್ಮದಿನದ ಮಾಸಾಚರಣೆ ಅಂಗವಾಗಿ ಸುಳ್ಯ ತಾಲೂಕು ಮೀಲಾದ್ ಸಮಿತಿ ವತಿಯಿಂದ ಕಳೆದ 23 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಪ್ರವಾದಿ ಸಂದೇಶ ಕಾಲ್ನಡಿಗೆ ಜಾಥಾ ಇದಾಗಿದ್ದು ‘ಅರಿಯಿರಿ ಮನುಕುಲದ ಪ್ರವಾದಿಯನ್ನ’ ಎಂಬ ದ್ವೇಯದೊಂದಿಗೆ ಪ್ರವಾದಿ ಸಂದೇಶ ಜಾಥಾ ಮತ್ತು ಸಾರ್ವಜನಿಕ ಸಭಾ ಕಾರ್ಯಕ್ರಮವನ್ನು ನಡೆಸಲಿದ್ದೇವೆ.
ಈ ಬೃಹತ್ ಕಾಲ್ನಡಿಗೆ ಜಾಥಕ್ಕೆ ನಾಳೆ ಸಂಜೆ 4 ಗಂಟೆಗೆ ಮೊಗರ್ಪಣೆ ಮಸೀದಿ ಬಳಿಯಿಂದ ಚಾಲನೆ ನೀಡಲಾಗುತ್ತದೆ. ಅಲ್ಲದೆ ವಿಶೇಷವಾಗಿ ಜಾಥಾದಲ್ಲಿ ಈ ಭಾರಿ 30 ಕ್ಕೂ ಹೆಚ್ಚು ಜಿಲ್ಲಾ ಮಟ್ಟದ ಕಲಾ ತಂಡಗಳು ಭಾಗವಹಿಸಲಿದೆ.















ಶಿಸ್ತುಬದ್ಧ ಸ್ಕೌಟ್ ತಂಡಗಳು, ಇಸ್ಲಾಮಿಕ್ ಸಂಪ್ರಾದಾಯಿಕ ದಫ್ ಕಲೆ, ಕಳರಿ ಪ್ರದರ್ಶನ ಜಾಥಾಕ್ಕೆ ಮೆರುಗು ನೀಡಲಿವೆ.
ಪ್ರವಾದಿ ಕೀರ್ತನೆ, ಬೈತ್, ಸಂದೇಶ ಸಾರುವ ಘೋಷವಾಕ್ಯ ಮೊಳಗುವ ಜಾಥಾ ಮೊಗರ್ಪಣೆ ಮಸೀದಿ ಬಳಿಯಿಂದ ಆರಂಭಗೊಂಡು ಗಾಂಧಿನಗರ ಪೆಟ್ರೋಲ್ ಪಂಪ್ ಬಳಿ ಸಮಾಪನಗೊಳ್ಳಲಿದೆ. ನಂತರ ಸಂಜೆ ಗಂಟೆ 7 ಗಂಟೆಗೆ ‘ಅರಿಯಿರಿ ಮನುಕುಲದ ಪ್ರವಾದಿಯನ್ನ’ಎಂಬ ಪ್ರವಾದಿ ಸಂದೇಶ ಸಾರ್ವಜನಿಕ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮವನ್ನು ಸಯ್ಯದ್ ಕುಂಞಿಕೋಯ ತಂಙಳ್ ಸಅದಿ ನಾವೂರು ಸುಳ್ಯ ರವರು ಉದ್ಘಾಟಿಸುವರು. ಸಯ್ಯದ್ ತ್ವಾಹಿರ್ ಸಅದಿ ತಂಙಳ್ ದುವಾ: ನೆರವೇರಿಸಲಿದ್ದಾರೆ. ಮುಖ್ಯ ಪ್ರಭಾಷಣಗಾರರಾಗಿ ಕೇರಳದ ಪ್ರಖ್ಯಾತ ವಾಗ್ಮಿ ನವಾಝ್ ಮನ್ನಾನಿ ತಿರುವನಂತಪುರಂ ಹಾಗೂ ಪ್ರಭಾಷಣಗಾರರಾಗಿ ಎಸ್.ಎನ್. ಬಶೀರ್ ಮಂಜೇಶ್ವರ, ಹುಸೇನ್ ಅಹ್ಸನಿ ಮೂರ್ನಾಡ್, ರಿಯಾಝ್ ಕಡಂಬು ಭಾವಹಿಸಲಿದ್ದಾರೆ. ಧಾರ್ಮಿಕ, ಸಾಮಾಜಿಕ ನೇತಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೆ.ಎಸ್.ಉಮ್ಮರ್ ಹಾಗೂ ಸಮಿತಿ ಕೋಶಾಧಿಕಾರಿ ಉನೈಸ್ ಪೆರಾಜೆ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಮಿಲಾದ್ ಸಮಿತಿ ಅಧ್ಯಕ್ಷ ಜುನೈದ್ ಎನ್.ಎ., ಉಪಾಧ್ಯಕ್ಷರಾದ ರಶೀದ್ ಜಟ್ಟಿಪಳ್ಳ, ಅಬ್ದುಲ್ ಖಾದರ್ ಸಂಗಂ, ಇಕ್ಬಾಲ್ ಸುಣ್ಣಮೂಲೆ, ನವಾಝ್ ಪಂಡಿತ್ ಜಯನಗರ ಉಪಸ್ಥಿತರಿದ್ದರು.










