ಸೆ.22 ರಿಂದ ಅ.1: ಪಂಜ ದೇಗುಲದ ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ನವರಾತ್ರಿ ಮಹೋತ್ಸವ

0

ಭಜನಾ ಸಂಕೀರ್ತನೆ l ಕಲಾ ಸೇವೆ l ಯಕ್ಷಗಾನ ಬಯಲಾಟ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ
ದುರ್ಗಾಪರಮೇಶ್ವರಿ ಅಮ್ಮನವರ ದೇಗುಲದಲ್ಲಿ ಸೆ.22ರಿಂದ ಅ. 1ರ ತನಕ ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

ಪ್ರತಿ ದಿನ ಬೆಳಿಗ್ಗೆ 7.30ಕ್ಕೆ ಮಹಾಪೂಜೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಂಜೆ 6.30 ರಿಂದ 7.45ರ ತನಕ ಭಜನಾ ಸಂಕೀರ್ತನೆ ,ರಾತ್ರಿ 8ಕ್ಕೆ ಮಹಾಪೂಜೆ, 8.10ರಿಂದ 8.30ರ ತನಕ ಕಲಾ ಸೇವೆ ನಡೆಯಲಿದೆ.ಅ.1 ರಂದು ವಾಹನಪೂಜೆ
ಪೂರ್ವಾಹ್ನ ಗಂಟೆ 8.ರಿಂದ 1.30ರವರೆಗೆ ಹಾಗೂ ಸಂಜೆ 5.ರಿಂದ 9.ರವರೆಗೆ ನಡೆಯಲಿದೆ.ಉಳಿದ ದಿನಗಳಲ್ಲಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಮಹಾಪೂಜೆ ನಂತರ ನಡೆಯಲಿದೆ.ಪ್ರತಿ ದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ.

ಸೆ.22ರಂದು ವನಿತಾ ಸಮಾಜ ಪಂಜ ಇವರಿಂದ ಭಜನೆ ಸಂಕೀರ್ತನೆ, ಮಾಸ್ಟರ್ ಪ್ರಕುಲ್ ತೋಟ ಇವರಿಂದ ತಬಲ ಮತ್ತು ಕೀಬೋರ್ಡ್ ವಾದನ, ಮಾಸ್ಟರ್ ಸೋಹನ್ ಪಂಜದಬೈಲು, ಪುತ್ಯ ಇವರಿಂದ ತಬಲ ಮತ್ತು ಹಾರ್ಮೋನಿಯಂ ವಾದನ, ಶ್ರೀಮತಿ ಗೀತ ಸುಧಾ ತೋಟ ಇವರಿಂದ ಭಕ್ತಿ ಗಾಯನ ನಡೆಯಲಿದೆ.
ಸೆ.23ರಂದು ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಸಂಪ್ಯಾಡಿ, ಬೀದಿಗುಡ್ಡೆ ಇವರಿಂದ ಭಜನಾ ಸಂಕೀರ್ತನೆ, ಶ್ರೀ ಶಾರದಾಂಬಾ ಮಕ್ಕಳ ಕುಣಿತ ಭಜನಾ ತಂಡ ನಾಗತೀರ್ಥ ಇವರಿಂದ ಕುಣಿತ ಭಜನೆ ನಡೆಯಲಿದೆ.
ಸೆ.24ರಂದು ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ ಭಜನಾ ಸಂಕೀರ್ತನೆ, ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರ ಇವರಿಂದ ‘ಕದಂಬ ಕೌಶಿಕೆ’ ಯಕ್ಷಗಾನ ಬಯಲಾಟ ನಡೆಯಲಿದೆ.

ಸೆ.25ರಂದು ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಕೇನ್ಯ ಇವರಿಂದ ಭಜನಾ ಸಂಕೀರ್ತನೆ.ಶ್ರೀ ಚಾಮುಂಡೇಶ್ವರಿ ಕುಣಿತ ಭಜನಾ ತಂಡ ಪಲ್ಲೋಡಿ, ಪಂಜ ಇವರಿಂದ’ ಕುಣಿತ ಭಜನೆ ನಡೆಯಲಿದೆ.

ಸೆ.26ರಂದು ಪಂಜ ವಲಯ ಹವ್ಯಕ ಮಹಿಳಾ ತಂಡ ಇವರಿಂದ ಭಜನಾ ಸಂಕೀರ್ತನೆ, ಕು.ಶ್ರದ್ಧಾಲಕ್ಷ್ಮೀ ಪಂಜ ಮತ್ತು ಕು.ಶ್ರಿಯಾಶಂಕರಿ ಪಂಜ ಇವರಿಂದ ಭಕ್ತಿಗಾಯನ ನಡೆಯಲಿದೆ.
ಸೆ.27 ಶ್ರೀ ವಿಷ್ಣು ಭಜನಾ ಮಂಡಳಿ ಅಳ್ಪೆ ಚಿಂಗಾಣಿಗುಡ್ಡೆ ಇವರಿಂದ ಭಜನಾ ಸಂಕೀರ್ತನೆ,ಕು.ಸುಧಾ ಕೋಟೆ ಪಂಜ ಇವರಿಂದ ಭಕ್ತಿ ಸುಧೆ ನಡೆಯಲಿದೆ.
ಸೆ.28 ರಂದು ಪಂಚಶ್ರೀ ಭಜನಾ ಮಂಡಳಿ ಪಂಬೆತ್ತಾಡಿ ಇವರಿಂದ ಭಜನಾ ಸಂಕೀರ್ತನೆ,ವಿದುಷಿ ಕು.ಪೃಥ್ವಿ ಶೆಟ್ಟಿ ಮತ್ತು ಕು.ಚರಿಷ್ಮಾ ರೈ ಪಲ್ಲೋಡಿ ಇದರಿಂದ ಭರತನಾಟ್ಯ ನಡೆಯಲಿದೆ.
ಸೆ.29 ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ನಾಗತೀರ್ಥ ಇವರಿಂದ ಭಜನಾ ಸಂಕೀರ್ತನೆ, ಕು.ಹೇಮಸ್ವಾತಿ ಕುರಿಯಾಜೆ ಮತ್ತು ತಂಡದವರಿಂದ ‘ಭರತನಾಟ್ಯ’ ಮತ್ತು ಯಕ್ಷಗಾನ ಭಾಗವತಿಕೆ ನಡೆಯಲಿದೆ.
ಸೆ.30ರಂದು ಶಿವಳ್ಳಿ ಸಂಪದ ಪಂಜ ವಲಯ ಇವರಿಂದ ಭಜನಾ ಸಂಕೀರ್ತನೆ.
ವಿದುಷಿ ಮಾನಸ ಪುನೀತ್ ರೈ ಅವರ ಶಿಷ್ಯೆ ಆದ್ಯಾ ಬಾಬ್ಲುಬೆಟ್ಟು ಮತ್ತು ಸ್ನೇಹ ಪಿ. ರಾವ್ ಇವರಿಂದ ಭರತನಾಟ್ಯ ನಡೆಯಲಿದೆ.
ಅ.1ರಂದು ಯುವ ಸ್ಫೂರ್ತಿ ಕಲ್ಮಡ್ಕ ಇವರಿಂದ ಭಜನಾ ಸಂಕೀರ್ತನೆ, ಎ. ಕೆ. ಮೇಘನ್ ಆರ್ನೋಜಿ ಇವರಿಂದ ಕೊಳಲು ವಾದನ ನಡೆಯಲಿದೆ.

ಯಕ್ಷಗಾನ ಬಯಲಾಟ:
ಸೆ.24ರಂದು ಶ್ರೀ ಶಾರದಾಂಬ ಯಕ್ಷಗಾನ ಅಧ್ಯಯನ ಕೇಂದ್ರ ಪಂಜ ಇದರ ವಿದ್ಯಾರ್ಥಿಗಳಿಂದ ದೇಗುಲದ ಪಾರ್ವತಿ ಸಭಾಭವನದಲ್ಲಿ ರಾತ್ರಿ 8ರಿಂದ
ಕದಂಬ ಕೌಶಿಕೆ ಯಕ್ಷಗಾನ ಬಯಲಾಟ:
‘ನಡೆಯಲಿದೆ.
ಭಾಗವತರಾಗಿ ಶಶಾಂಕ ಎಲಿಮಲೆ ಮತ್ತು ಕು.ರಚನಾ ಚಿದ್ಗಲ್, ಚೆಂಡೆಯಲ್ಲಿ ಲಕ್ಷ್ಮೀಶ ಶಗ್ರಿತ್ತಾಯ ಪಂಜ, ಮದ್ದಳೆಯಲ್ಲಿ ಹರೀಶ್ ರೈ ಇಚಿಲಂಪಾಡಿ, ಚಕ್ರತಾಳದಲ್ಲಿ ಅಂಕುಶ್ ಎಣ್ಣೆಮಜಲು ಮತ್ತು ವಾಗೀಶ ಪಳ್ಳಿಗದ್ದೆ ಸಹಕರಿಸಲಿದ್ದಾರೆ.

ಎಂದು ದೇಗುಲದ ಪ್ರಕಟಣೆಯಲ್ಲಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್‌ ಕಾನತ್ತೂ‌ರ್ ತಿಳಿಸಿದ್ದಾರೆ.