ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನಿಂದ ಸಾರ್ವಜನಿಕ ಬಸ್ಸು ತಂಗುದಾಣಗಳ ನವೀಕರಣ

0

ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಈ ವರ್ಷದ ವಿನೂತನ ಕಾರ್ಯಕ್ರಮವಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಗೆ ಒಳಪಟ್ಟ 12 ಬಸ್ಸು ತಂಗುದಾಣಗಳನ್ನು ಸ್ವಚ್ಛಗೊಳಿಸಿ, ಅಂದಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ಅರ್ಪಣೆ ಮಾಡುವುದಾಗಿದ್ದು ಅದರಂತೆ 4 ಬಸ್ಸು ತಂಗುದಾಣ ಗಳನ್ನು ಅಂದಗೊಳಿಸಲಾಯಿತು.

ಅರಂಪಾಡಿ, ಹೊಸೋಳಿಕೆ,, ಪರ್ವತಮುಖಿ,ಹಾಗೂ ಕುಲ್ಕುಂದ ಬಸ್ಸು ತಂಗುದಾಣಗಳನ್ನು ಅ.18 ರಂದು ಅಂದಗೊಳಿಸಲಾಯಿತು. ಸ್ವಚ್ಚ ಮಾಡಿ ಪೈಂಟಿಂಗ್ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಅರ್ಪಿಸಲಾಗಿದೆ.

4 ತಂಗು ದಾಣಗಳ ಪ್ರಾಯೋಜಕರುಗಳಾಗಿ ಲಯನ್ಸ್ ಜಿಲ್ಲೆ 318 ಪ್ರಾಂತೀಯ ಅಧ್ಯಕ್ಷ ರಂಗಯ್ಯ ಶೆಟ್ಟಿಗಾರ್, ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷೇ ವಿಮಲಾ ರಂಗಯ್ಯ, ಡಾl ಶಿವಕುಮಾರ್ ಹೊಸೊಳಿಕೆ, ಪ್ರಕಾಶ್ ಶೆಟ್ಟಿ ಕುಂದಾಪುರ, ದಿನೇಶ್ಎಂಪಿ, ಪವನ್ ಎಂಡಿ, ಸತೀಶ ಕೂಜುಗೋಡು, ಜಗದೀಶ ಪಡ್ಪು, ಸಹಕರಿಸಿದ್ದಾರೆ. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ಪೂರ್ವ ಅಧ್ಯಕ್ಷ ರಾಮಚಂದ್ರ ಪಳಂಗಾಯ, ಕಾರ್ಯದರ್ಶಿ ಗಾಯತ್ರಿ ಕೃಷ್ಣ ಕುಮಾರ್, ನಿಕಟ ಪೂರ್ವ ಕಾರ್ಯದರ್ಶಿ ಕೃಷ್ಣಕುಮಾರ್ ಬಾಳುಗೋಡು, ಖಜಾಂಜಿ ಭಾರತಿ ದಿನೇಶ್, ಸದಸ್ಯ ಮೋಹನ್ದಾಸ್ ರೈ, ಸುಬ್ರಮಣ್ಯ ಇನ್ನರ್ ವೀಲ್ ಕ್ಲಬ್ ಸದಸ್ಯರುಗಳಾದ ಶೋಭಾ ಗಿರಿಧರ್ , ಜಾನಕಿ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.