














ಶ್ರೀಮುಖ ಪ್ರತಿಷ್ಠಾನ ಪಂಜ ಮತ್ತು ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯ ಪಂಜ, ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ವನಿತಾ ಸಮಾಜ ಪಂಜ ಇದರ ವತಿಯಿಂದ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ಸಂಸ್ಕಾರ ಅಧ್ಯಯನ ಪ್ರಾರಂಭೋತ್ಸವ ಅ.25 ರಂದು ನಡೆಯಿತು.
ಕಾರ್ಯಕ್ರಮವನ್ನು ಕೆ. ಕೃಷ್ಣ ವೈಲಾಯ ದೀಪ ಬೆಳಗಿಸಿ ಉದ್ಘಾಟಿಸಿದರು.ಸಭಾಧ್ಯಕ್ಷತೆ ಯನ್ನು ಶ್ರೀಮುಖ ಪ್ರತಿಷ್ಟಾನ ಅಧ್ಯಕ್ಷ ಉದಯ ಶಂಕರ್ ಅಡ್ಕ ವಹಿಸಿದ್ಧರು. ವೇದಿಕೆಯಲ್ಲಿ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಪಂಜ ವನಿತಾ ಸಮಾಜ ದ ಅಧ್ಯಕ್ಷೆ ಶ್ರೀಮತಿ ಸುಮಾ ಕುದ್ವ, ಪಂಜ ಶಾರದಾಂಬ ಭಜನಾ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಪುತ್ಯ ಹಾಗೂ ಶ್ರೀಮುಖ ಪ್ರತಿಷ್ಟಾನ ಕಾರ್ಯದರ್ಶಿ ಶ್ರೀಮತಿ ಸುವರ್ಣಿನಿ ಎನ್ ಎಸ್
ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಸುವರ್ಣಿನಿ ಎನ್ ಎಸ್ ಸ್ವಾಗತಿಸಿದರು ಮತ್ತು ವಂದಿಸಿದರು.ಸಂಸ್ಕಾರ ಅಧ್ಯಯನ ಶಿಬಿರ ಪ್ರತಿ ಆದಿತ್ಯವಾರ ಸಂಜೆ 3 ಗಂಟೆ ಯಿಂದ ಮಾಡುವುದೆಂದು ಶಿಬಿರದ ಪ್ರಾಚಾರ್ಯರಾದ ಡಾ. ವೆಂಕಟೇಶ ಮಂಜುಳಗಿರಿ
ತಿಳಿಸಿದರು.










