ಜಯನಗರ ಮಿಲಿಟರಿ ಗ್ರೌಂಡ್ ಅಡಿಸ್ಥಳ ಸಮಸ್ಯೆ ಕುರಿತು ಪರಿಶೀಲಿಸಿದ ಕಂದಾಯ ಅಧಿಕಾರಿಗಳು

0

ಸುಳ್ಯ ನಗರ ವ್ಯಾಪ್ತಿಯ ಜಯನಗರ ಮಿಲಿಟರಿ ಗ್ರೌಂಡ್ ನ ಅಡಿಸ್ಥಳದ ಮೂಲಭೂತ ಸಮಸ್ಯೆಯ ಕುರಿತು ಹಕ್ಕೋತ್ತಾಯ ಸಮಿತಿ ಯಿಂದ ಹೋರಾಟ ನಡೆಯುತ್ತಿದ್ದು ನ. 14 ರಂದು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

ಪ್ರಕರಣದ ಬಗ್ಗೆ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಸ್ತುತ ವರದಿಯ ವಿಚಾರಣೆ ನಡೆಯುತ್ತಿದ್ದು ಜಿಲ್ಲಾಧಿಕಾರಿ ಯವರ ಆದೇಶದಂತೆ ಸುಳ್ಯ
ತಹಶೀಲ್ದಾರ್ ಶ್ರೀಮತಿ ಮಂಜುಳ ,ಉಪ ತಹಶೀಲ್ದಾರ್ ಚಂದ್ರಶೇಖರ,
ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್,ಕಂದಾಯ ನೀರಿಕ್ಷಕ ಅವಿನ್ ರಂಗತ್ತಮಲೆ ಯವರು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ
ಹಕ್ಕೋತ್ತಾಯ ಸಮಿತಿ ಸಂಚಾಲಕ ಜಿ.ಜಗನ್ನಾಥ ಜಯನಗರ,ಜಯನಗರ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ರಂಜಿತ್ ಕುಮಾರ್ ಹಾಗೂ ಹಕ್ಕೋತ್ತಾಯ ಸಮಿತಿ ಸದಸ್ಯರಾದ ರಾಕೇಶ್ ಕುಂಟಿಕಾನ, ಮತ್ತಿತರರು ಉಪಸ್ಥಿತರಿದ್ದರು.