ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸಂಘದ ಕಛೇರಿ ಯಲ್ಲಿ ಇಂದು (ಆ. 13) ರಂದು ಎಸ್ ಎಸ್ ಎಲ್ ಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ದ ಅನುಷ್ ಎ ಯಲ್ ರವರೀಗೆ ಅಭಿನಂದನಾ ಕಾರ್ಯಕ್ರಮವು ನಡೆಯಿತು. ಸಂಘದ ಅಧ್ಯಕ್ಷರಾದ ಡಾ ದಾಮೋದರ ನಾರಾಲ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯದರ್ಶಿ ಕೆ ರಾಮಣ್ಣ ಗೌಡ ಕೊಂಡೆಬಾಯಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಹಿರಿಯ ನಿರ್ದೇಶಕ ಲೋಕಯ್ಯ ಗೌಡ ಕೆ ಇವರು ಸನ್ಮಾನಿತರಿಗೆ ಉಜ್ವಲ ಭವಿಷ್ಯಕ್ಕೆ ಶುಭಹಾರೈಸಿದರು. ಯುವ ಘಟಕದ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು ಗೌಡ ಸಮುದಾಯದ ವಿದ್ಯಾರ್ಥಿಯೊಬ್ಬ ಈ ಪರಿಯ ಸಾಧನೆ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಸಂಘದ ಪದಾಧಿಕಾರಿಗಳಾದ ಪುಂಡರೀಕ ಅರಂಬೂರು. , ಲಿಂಗಯ್ಯ, ಶ್ರೀ ಮತಿ ಪೂರ್ಣಿಮಾ, ಸುಕುಮಾರ್ ಯು ಬಿ ಯಸ್ , ಗುರುದೇವ ಯು ಬಿ, ಸದಾನಂದ ಗೌಡ ಡಿ ಪಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸೌಮ್ಯ ಸುಕುಮಾರ್ , ಕಾರ್ಯದರ್ಶಿ ಶ್ರೀಮತಿ ಸವಿತಾ ಡಿ ಕೆ , ಯುವ ಘಟಕದ , ಕಾರ್ಯದರ್ಶಿ ರಾಘವೇಂದ್ರ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಲಿಂಗಯ್ಯ ಯು ಯಸ್ ಧನ್ಯವಾದ ಅರ್ಪಿಸಿದರು.