ಸುಳ್ಯ ಬಸ್ ನಿಲ್ದಾಣದ ಬಳಿಯಿರುವ ಹಿಂದುಸ್ಥಾನ್ ಸಿಟಿ ಡೆವಲಪರ್ಸ್ ವತಿಯಿಂದ 74 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು.
ಹಿಂದುಸ್ಥಾನ್ ಸಿಟಿ ಡೆವಲಪರ್ಸ್ ನ ಡೈರೆಕ್ಟರ್ ಇಬ್ರಾಹಿಂ ಪೊಸೊಟ್ಟು ರವರು ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರಿಸುವಂತೆ ಮತ್ತು ದೇಶದಲ್ಲಿರುವ ಕೊರೋನ ಮಹಾಮಾರಿಯಿಂದ ಮುಕ್ತವಾಗಿಸಲು ದೇಶದೊಂದಿಗೆ ಕೈಜೋಡಿಸುವಂತೆ ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಸ್ತುವಾರಿ ಜಿ. ಎಂ. ಇಬ್ರಾಹಿಂ ಶಿಲ್ಪಾ, ಸಂಸ್ಥೆಯ ಉಸ್ತುವಾರಿ ಇಂಜಿನಿಯರ್ ರವಿನಂದನ್ ಡಿ.ಆರ್ ಕಲ್ಲುಮುಟ್ಲು, ಕಾರ್ಮಿಕ ಉಸ್ತುವಾರಿ ಹರೀಶ್ ಬಿ ಮಂಜೇಶ್ವರ, ಆಂಜನಪ್ಪ ಎಸ್ ಮತ್ತು ಇತರ ಕಾರ್ಮಿಕರು ಉಪಸ್ತಿತರಿದ್ದರು.