ಸುಳ್ಯ ತಾಲ್ಲೂಕು ಆಟೋ ರಿಕ್ಷಾ ಚಾಲಕರ ಸಂಘದ ಗುತ್ತಿಗಾರು ಘಟಕದ ವತಿಯಿಂದ ಒಂದು ದಿನದ ಕ್ರಿಕೆಟ್ ಪಂದ್ಯಾಟ ಇಂದು ಗುತ್ತಿಗಾರಿನಲ್ಲಿ ನಡೆಯಿತು.
ಗುತ್ತಿಗಾರು ಗ್ರಾಪಂ ಮಾಜಿ ಅಧ್ಯಕ್ಷ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಈ ಸಂದರ್ಭ ಗುತ್ತಿಗಾರು ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಗುತ್ತಿಗಾರು ಗ್ರಾ ಪಂ ಪಿಡಿಒ ಶ್ಯಾಮ್ ಪ್ರಸಾದ್, ಗುತ್ತಿಗಾರು ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ಶಶಿಧರ ಕುಕ್ಕುಜೆ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಕಂಡೋಡಿ ಉಪಸ್ಥಿತರಿದ್ದರು . ರಿಕ್ಷಾ ಚಾಲಕರು, ಸ್ಥಳೀಯರು, ಆಟಗಾರರು ಉಪಸ್ಥಿತರಿದ್ದರು.
ಪೋಟೋ : ಪ್ರಕೃತಿ ಸ್ಟುಡಿಯೋ ಗುತ್ತಿಗಾರು