ದೇವಚಳ್ಳ ಗ್ರಾಮದ ಗುಡ್ಡೆ – ಬಟ್ಟೆಕಜೆಯಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ಮಠ ದಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ ಶ್ರೀ ಧರ್ಮದೈವ ಹಾಗೂ ಉಪದೈವಗಳ ನೇಮ ನಡಾವಳಿಯು ಮಾ.22,23 ರಂದು ನಡೆಯಿತು.
ಮಾ.22 ರಂದು ಗಣಪತಿ ಹವನ, ನಾಗತಂಬಿಲ, ಮಹಾಪೂಜೆ ನಡೆದು ನಂತರ ಹರಿಸೇವೆ ನಡೆಯಿತು.ಸಂಜೆ ಕೆಂಚಿರಾಯ ಪೂಜೆ, ಗುರುಕಾರ್ನೂರು, ದೇವತೆ, ಕಲ್ಲುರ್ಟಿ,ಅಂಗಾರ ಬಾಕುಡ,ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಪುರುಷರಾಯ ದೈವದ ನೇಮ ನಡೆಯಿತು.
ಮಾ.23 ರಂದು ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಶ್ರೀ ನಾಗಚಾಮುಂಡಿ ನೇಮೋತ್ಸವ ನಡೆದು ಅಜ್ಜಿ-ಕೂಜಿ, ಗುಳಿಗ ದೈವದ ನೇಮ ನಡೆಯಿತು. ಈ ಸಂದರ್ಭದಲ್ಲಿ ಗುಡ್ಡೆ ಕುಟುಂಬಸ್ಥರು,ಊರವರು ಉಪಸ್ಥಿತರಿದ್ದರು.