ಸುಳ್ಯ ಶಾಸಕ, ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ ಅವರ ಮಂಗಳೂರಿನ ಜಿಲ್ಲಾ ಕಚೇರಿಯು ಜ.17ರಂದು ಬೆಳಿಗ್ಗೆ ಗಣಹೋಮದೊಂದಿಗೆ ಉದ್ಘಾಟನೆಗೊಂಡಿತು.
ಮಂಗಳೂರಿನ ಸ್ಟೇಟ್ ಬ್ಯಾಂಕ್ – ಸೈಂಟ್ ಆನ್ಸ್ ಶಾಲೆ ರಸ್ತೆಯ ಮರೈನ್ ಬಂಗಲೆ (ಬಂದರು ಇಲಾಖೆ ಕಚೇರಿ) ಯಲ್ಲಿ ಈ ಕಛೇರಿಯು ಉದ್ಘಾಟನೆಯಾಗಿದೆ.
ಈ ಸಂದರ್ಭದಲ್ಲಿ ಸಚಿವರ ಪತ್ನಿ ಶ್ರೀಮತಿ ವೇದಾವತಿ ಅಂಗಾರ , ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ,
ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ದೀಪ ಬೆಳಗಿಸುವ ಮೂಲಕ ಕಚೇರಿ ಶುಭಾರಂಭಗೊಂಡಿತು.