ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ ಇದರ ಮಾಸಿಕ ಸಭೆಯು ಎ.18 ರಂದು ಪಂಚಾಯತ್ ನ ಕುಮಾರಧಾರ ಸಭಾಭವನದಲ್ಲಿ ಒಕ್ಕೂಟ ಅಧ್ಯಕ್ಷರಾದ ಸುಜಾತ.ಜಿ.ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಒಕ್ಕೂಟದ ಕಾರ್ಯದರ್ಶಿ ಮೀನಾಕ್ಷಿ ಪಿ., ಖಜಾಂಜಿ ಭುವನೇಶ್ವರಿ, ಉಪಾಧ್ಯಕ್ಷೆ ರಮಣಿ ಕೆ. ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮೃದ್ದಿ ಸಂಜೀವಿನಿ ಸಂಘದ ಸದಸ್ಯೆ ಪ್ರೇಮ ರವರಿಗೆ ಅಂಗಡಿ ವ್ಯಾಪಾರದ ಉದ್ದೇಶ ಕ್ಕಾಗಿ 75,000 ರೂ ಚೆಕ್ ವಿತರಣೆ ಮಾಡಲಾಯಿತು.ಮೀನಾಕ್ಷಿ ವರದಿ ಓದಿದರು. ಎಲ್.ಸಿ.ಆರ್.ಪಿ ರತ್ನಕುಮಾರಿ ಸ್ವಾಗತಿಸಿದರು.ಎಂ.ಬಿ.ಕೆ ಹೇಮಾವತಿ ಧನ್ಯವಾದ ಸಮರ್ಪಣೆ ಮಾಡಿದರು.