ನಾಲ್ಕೂರು ಗ್ರಾಮದ ದಂಡಿನಮನೆಯವರಾಗಿದ್ದು, ಕೆ ಪಿ ಟಿ ಸಿ ಎಲ್ ನಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿದ್ದು ಇತ್ತೀಚೆಗೆ ನಿಧನರಾದ ಜಗಮೋಹನ್ ದಂಡಿನಮನೆ ಅವರ ವೈಕುಂಠ ಸಮಾರಂಭ ಇಂದು ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.
ಮೃತರ ಬಗ್ಗೆ ಕೇಶವ ಹೊಸೊಳಿಕೆ ನುಡಿನಮನ ಸಲ್ಲಿಸಿದರು. ಸಮಾರಂಭಕ್ಕೆ ಆಗಮಿಸಿದ್ದ ಬಂಧುಗಳು ಒಂದು ನಿಮಿಷಗಳ ಮೌನ ಪ್ರಾರ್ಥನೆ ನೆರವೇರಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ದರು. ಸಮಾರಾಧನೆಯಲ್ಲಿ ಕುಟುಂಬಸ್ಥರು, ಬಂಧುಗಳು, ಹಿತೈಷಿಗಳು ಭಾಗವಹಿಸಿದ್ದರು.