ಬೆಳ್ಳಾರೆ ಗ್ರಾಮದ ಗೌರಿಹೊಳೆ ಸಮೀಪವಿರುವ ಗೌರಿಪುರಂನಲ್ಲಿ ತಂತ್ರಿವರ್ಯರಾದ ವೇದಮೂರ್ತಿ ಬ್ರಹ್ಮಶ್ರೀ ಕುನ್ನತ್ತಿಲ್ ಮುರಳಿಕೃಷ್ಣ ತಂತ್ರಿಯವರ ಮಾರ್ಗದರ್ಶನದಲ್ಲಿ ನೂತನವಾಗಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ನಿರ್ಮಾಣವಾಗಲಿದ್ದು, ಸಾನಿಧ್ಯದ ಸಮೀಪ ಮೇ. 26, 27ರಂದು ಶ್ರೀ ನಾಗದೇವರ ಪ್ರತಿಷ್ಟೆ ನಡೆಯಲಿದೆ.
ಈ ಬಗ್ಗೆ ಮೇ. 1ರಂದು ನಾಗ ಸನ್ನಿಧಿಯಲ್ಲಿ ಶ್ರಮದಾನ ನಡೆಯಿತು.
ಶ್ರಮದಾನದಲ್ಲಿ ಸಮಿತಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ ಪಡ್ಪು, ಕಾರ್ಯದರ್ಶಿ ಗೋಪಾಲಕೃಷ್ಣ ಪಿ.ಎಸ್. ಬಂಡಿಮಜಲು, ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಹಿರಿಯ ಸಲಹೆಗಾರರು ಸೇರಿದಂತೆ ಊರಿನ ಭಕ್ತಾದಿಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.