ಮೊದಲ ಪಂದ್ಯ ಮುಕ್ತಾಯಗೊಳ್ಳುತ್ತಲೇ ಸುರಿದ ಧಾರಾಕಾರ ಮಳೆ
ಸುಳ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ನ ಎರಡನೇ ದಿನದ ಪಂದ್ಯಾಟಕ್ಕೂ ವರುಣನ ಅವಕೃಪೆಯಾಗಿದೆ.
ಸಂಜೆಯಿಂದಲೇ ಮಳೆಯ ಭೀತಿ ಇತ್ತಾದರೂ 6 ಗಂಟೆಯ ವೇಳೆಗೆ ಮೊದಲ ಪಂದ್ಯ ಕರ್ನಾಟಕ ಪೋಸ್ಟಲ್ ಮತ್ತು ಎಸ್.ಆರ್.ಎಂ. ಚೆನ್ನೈ ತಂಡಗಳ ನಡುವೆ ಸಾಂಗವಾಗಿ ಆರಂಭವಾಯಿತು.
ಮೂರು ಸೆಟ್ ಗಳಲ್ಲಿ ನಡೆದ ಈ ಪಂದ್ಯಾಟ ಮೂರನೇ ಸೆಟ್ ನ ಕೊನೆಯಲ್ಲಿ ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಮಳೆ ಸುರಿಯತೊಡಗಿತು. ಹೀಗಾಗಿ ಮುಂದಿನ ಪಂದ್ಯಾಟಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.