ಸುಬ್ರಹ್ಮಣ್ಯದ ಅರಂಪಾಡಿಯ ಬಹುವರ್ಷದ ಕನಸಾದ ಕೃಷಿ ನೀರಾವರಿ ವ್ಯವಸ್ಥೆಗಾಗಿ ಇಲಾಖಾ ವತಿಯಿಂದ ಪಂಪ್ ಸೆಟ್ ಗೆ 3 ಫೇಸ್ ವಿದ್ಯುತ್ ಪರಿವರ್ತಕ ಅಳವಡಿಸಲಾಯಿತು.
ಈ ಸಂಧರ್ಭದಲ್ಲಿ ಎ ಇ ಒ ಚಿದಾನಂದ, ಕಂಟ್ರಾಕ್ಟರ್ ಉದಯ ಕುಮಾರ್ ಹರಿಹರ, ಸಿಬ್ಬಂದಿಗಳಾದ ಪಾಲಾಕ್ಷ, ಉಮೇಶ್, ಊರಿನ ಪ್ರಮುಖರಾದ ಕಿಶೋರ್ ಅರಂಪಾಡಿ, ಈಶ್ವರ ಅರಂಪಾಡಿ, ಧರ್ಮಪಾಲ, ಸಂಜೀವ ಅರಂಪಾಡಿ, ಕೃಷ್ಣ ಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.