ಹಿರಿಯ ಸಾಹಿತಿ ವಿದ್ವಾನ್ ಟಿ.ಜಿ.ಮುಡೂರು ರವರು ಎ.20 ರಂದು ನಿಧನರಾಗಿದ್ದು ಅವರಿಗೆ ನುಡಿ ನಮನ ಮತ್ತು ವೈಕುಂಠ ಸಮಾರಾಧನೆ ಕಾರ್ಯಕ್ರಮ ಮೇ. 8 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಿತು.
ಡಾ|ನರೇಂದ್ರ ರೈ ದೇರ್ಲ,ಡಾ|ಸುಂದರ ಕೇನಾಜೆ, ರಾಧಾಕೃಷ್ಣ ಕಲ್ಚಾರ್, ಜಾಕೆ ಮಾಧವ ಗೌಡ , ಚಿನ್ನಪ್ಪ ಸಂಕಡ್ಕ, ಶಶಿಧರ ಪಳಂಗಾಯ, ಚಂದ್ರಶೇಖರ ಪೇರಾಲು, ಡಾ|ಚಿನ್ನಪ್ಪ ಗೌಡ,ಡಾ.ಯು.ಪಿ.ಶಿವಾನಂದರವರು ನುಡಿ ನಮನ ಸಲ್ಲಿಸಿದರು.
ಇದೇ ವೇಳೆ ಅವರ ಬದುಕು ಬರಹ ನುಡಿ ಚಿತ್ರ ಪ್ರದರ್ಶನ ಗೊಂಡಿತು.
ಟಿ.ಜಿ.ಮುಡೂರು ರವರ ಪುತ್ರ ಸವಿತಾರ ಮುಡೂರು , ಪುತ್ರಿಯರಾದ ಶ್ರೀಮತಿ ಶೋಭಾ ಶಿವಾನಂದ ಊರುಬೈಲು, ಶ್ರೀಮತಿ ಗೀತಾ ಪುಂಡರಿಕ ಅಡ್ಪಂಗಾಯ,ಡಾ. ಮಮತಾ ಕಿರಣ್ ಉಳುವಾರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ,
ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದು , ಮೌನ ಪ್ರಾರ್ಥನೆ ಸಲ್ಲಿಸಿ,ಮೃತರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ದುರ್ಗಾ ಕುಮಾರ್ ನಾಯರ್ ಕೆರೆ ಕಾರ್ಯಕ್ರಮ ನಿರೂಪಿಸಿದರು. ಸವಿತಾರ ಮುಡೂರು ವಂದಿಸಿದರು. ಕಾರ್ಯಕ್ರಮವು ಸುದ್ದಿ ಚಾನೆಲ್ ನಲ್ಲಿ ನೇರ ಪ್ರಸಾರ ನಡೆಯಿತು.