ಸುಳ್ಯ ತಾಲೂಕಿನ ವಿಕಲ ಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ವಿಶೇಷ ಕ್ಯಾಂಪ್ ಇಂದು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು. ವಿಕಲಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆ ಯ ಸಹಯೋಗದಲ್ಲಿ ನಡೆದ ಈ ಕ್ಯಾಂಪ್ನಲ್ಲಿ ತಾಲೂಕು ಪಂಚಾಯತ್ನ ವಿಕಲಚೇತನ ಇಲಾಖೆಯ ಮೇಲ್ವಿಚಾರಕರಾದ ಚಂದ್ರ ಶೇಖರ್, ನಗರ ಪಂಚಾಯತ್ನ ವಿಕಲಚೇತನರ ಇಲಾಖೆಯ ಮೇಲ್ವಿಚಾರಕರಾದ ಪ್ರವೀಣ್ ನಾಯಕ್, ತಾಲೂಕಿನ ಇತರ ಪಂಚಾಯತ್ಗಳ ವಿಕಲಚೇತನರ ಮೇಲ್ವಿಚಾರಕರಾದ ಪುಷ್ಪಶ್ರೀ, ಷಣ್ಮುಖ, ದಿನೇಶ, ಕಾವೇರಿ, ಸವಿತಾ, ಹರ್ಷಿತ್, ವೆಂಕಟ್ರಮಣ ಮತ್ತು ಆರೋಗ್ಯ ಇಲಾಖೆಯ ಸಿಸ್ಟರ್ ನಯನ ಮೊದಲಾದವರಿದ್ದರು. ಡಾ. ಕರುಣಾಕರ್ ನೇತೃತ್ವದಲ್ಲಿ ಎಲ್ಲಾ ತಜ್ಞ ವೈದ್ಯರು ಸಹಕಾರ ನೀಡಿದರು. ಎಂಡೋ ಸೇರಿದಂತೆ ಹಲವಾರು ಜನ ವಿಕಲಚೇತನರು ಇದರ ಪ್ರಯೋಜನ ಪಡೆದುಕೊಂಡರು.