ಜೆಡಿಎಸ್ ಪಕ್ಷದ ವತಿಯಿಂದ ಕಳೆದ 1 ತಿಂಗಳಿನಿಂದ ರಾಜ್ಯಾದ್ಯಂತ ನಡೆಯುತ್ತಿದ್ದ ” ಜನತಾ ಜಲಧಾರೆ ” ಯ ಸಮಾರೋಪ ಕಾರ್ಯಕ್ರಮ ಹಾಗೂ ಗಂಗಾರತಿ ಕಾರ್ಯಕ್ರಮ ಮಹಾಸಂಕಲ್ಪ ಸಮಾವೇಶ ಮೇ 13 ರಂದು ನೆಲಮಂಗಲ ಧರ್ಮಶ್ರೀ ರೆಸಾರ್ಟ್ ಪಕ್ಕದ ಮೈದಾನದಲ್ಲಿ ನಡೆಯಿತು.
ಈ ಸಮಾವೇಶದಲ್ಲಿ ಸುಳ್ಯದ ಮುಖಂಡರುಗಳಾದ ಪಕ್ಷದ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ರಾಕೇಶ್ ಕುಂಟಿಕಾನ, ಮೋಹನ್ ಚಾಂತಾಳ, ಹನೀಫ್ ಮೊಟ್ಟೆಂಗಾರು ಮೊದಲಾದವರು ಭಾಗವಹಿಸಿದ್ದರು.