ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನ ಸುಸಜ್ಜಿತ ಕಟ್ಟಡದಲ್ಲಿ ಸುಳ್ಯ ಫ್ಯಾಷನ್ ವೆಂಚರ್ ರವರ ಪಾಲುದಾರಿಕೆಯ ಗೋಕುಲಂ ಕಿಡ್ಸ್ ವೇರ್ ಮಳಿಗೆಯು ಮೆ.20 ರಂದು ಉದ್ಘಾಟನೆ ಯಾಗಲಿರುವುದು.
ಮೀನುಗಾರಿಕಾ , ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ರವರು ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಹಿರಿಯರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ | ಗಿರೀಶ್ ಭಾರದ್ವಾಜ್ ದೀಪ ಬೆಳಗಿಸಲಿರುವರು. ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಶ್ರೀ ಹರಿ ಕಾಂಪ್ಲೆಕ್ಸ್ ಮಾಲಕ ಉದ್ಯಮಿ ಕೃಷ್ಣ ಕಾಮತ್ ಅರಂಬೂರು, ಸುಳ್ಯ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಆಡಳಿತ ಧರ್ಮದರ್ಶಿ ಡಾ.ಹರಪ್ರಸಾದ್ ತುದಿಯಡ್ಕ, ವೈದ್ಯರಾದ ಡಾ . ಶ್ರೀಕೃಷ್ಣ ಭಟ್ ಮಕ್ಕಳ ತಜ್ಞರು , ನವೀನ್ ಅಳಿಕೆ ಅಧ್ಯಕ್ಷರು ಹೆಚ್ .ಇ.ಎಫ್ ಸುಳ್ಯ ಘಟಕ , ಸುಳ್ಯ ಬಿಸಿನೆಸ್ ವೆಂಚರ್ ನ ಮ್ಯಾನೆಜಿಂಗ್ ಪಾಲುದಾರ ಚಿದಾನಂದ ವಿದ್ಯಾನಗರ ರವರುಉಪಸ್ಥಿತರಿರುತ್ತಾರೆ.ಸುಳ್ಯ ಫ್ಯಾಷನ್ ವೆಂಚರ್ ನ ಸುಸಜ್ಜಿತ ಹವಾನಿಯಂತ್ರಿತ ಮಳಿಗೆಯಲ್ಲಿ ಪ್ರಸಿದ್ಧ ಕಂಪೆನಿಯ ಮಕ್ಕಳ ಅತ್ಯಾಕರ್ಷಕ ಸಿದ್ಧ ಉಡುಪುಗಳು ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದು ಕೊಳ್ಳುವಂತೆ ಪಾಲುದಾರರು ವಿನಂತಿಸಿಕೊಂಡಿರುತ್ತಾರೆ.