ಕುಕ್ಕೆ ಶ್ರೀ ಸುಬ್ರಹ್ಮ ಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯದಲ್ಲಿ ಉಣ್ಣೆಯ ದಾರದಿಂದ (ಉಲ್ಲನ್ ದಾರ) ವಿವಿಧ ರೀತಿಯ ಕರಕೌಶಲ್ಯದ ವಸ್ತುಗಳನ್ನು ತಯಾರಿಸುವ ತರಬೇತಿ ಕಾರ್ಯಕ್ರಮವನ್ನು ಮೇ. 28 ರಂದು ಉದ್ಯಮಶೀಲ ವಿಭಾಗದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಯಿತು.
ಈ ತರಬೇತಿಯನ್ನು ಮಹಾವಿದ್ಯಾಲಯದ ಪ್ರಥಮ ಬಿ.ಕಾಂ ವಿದ್ಯಾರ್ಥಿ ಶರತ್. ಎಂ.ಆರ್. ಇವರು ನಡೆಸಿಕೊಟ್ಟರು. ಅದೇ ರೀತಿ ಕನ್ನಡ ಉಪನ್ಯಾಸಕಿ ಶ್ರೀಮತಿ ಸುಮಿತ್ರಾ ಹಾಗೂ ಉದ್ಯಮಶೀಲತೆ ಘಟಕದ ಸಂಯೋಜಕರಾದ ಡಾ. ನೀತು ಸೂರಜ್ ಮತ್ತು ಘಟಕದ ವಿದ್ಯಾರ್ಥಿ ನಾಯಕಿಯಾದ ಕಾವ್ಯಶ್ರೀ ಯು.ಜಿ. ಉಪಸ್ಥಿತರಿದ್ದರು.