ಪ್ರವೀಣ್ ನೆಟ್ಟಾರು ಮನೆಗೆ ಒಡಿಯೂರು ಶ್ರೀಗಳ ಭೇಟಿ

0

ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಒಡಿಯೂರು ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಯವರು ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ಹೇಳಿದರು.

ಘಟನೆಯ ಕುರಿತು ಮನೆಯವರಿಂದ ಪೂರ್ಣ ಮಾಹಿತಿ ಪಡೆದ ಸ್ವಾಮೀಜಿಯವರು ಧೈರ್ಯದಿಂದಿರುವಂತೆ ಮನೆಯವರಿಗೆ ಸಾಂತ್ವಾನ ಹೇಳಿದರು. ಬಳಿಕ ಸುದ್ದಿಗಾರರನ್ನುದ್ಧೇಶಿಸಿ ಮಾತನಾಡಿ, ಪ್ರವೀಣ್ ಹತ್ಯೆಯ ಘಟನೆಯ ತನಿಖೆ ಇನ್ನಷ್ಟು ಚುರುಕಾಗಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದರು.

ಕೆಎಂಎಫ್ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ, ಶ್ರೀನಾಥ್ ರೈ ಬಾಳಿಲ ಮೊದಲಾದವರು ಸ್ವಾಮೀಜಿಯ ಜೊತೆಗಿದ್ದರು.