ಧಾರಾಕಾರ ಸುರಿದ ಮಳೆ ಹಾಗೂ ನೆರೆ ಪರಿಸ್ಥಿತಿಯಿಂದ ಸುಳ್ಯ ತಾಲೂಕಿನ ಕಾಲೇಜು, ಶಾಲೆ ಮತ್ತು ಅಂಗನವಾಡಿಗಳಿಗೆ ಇಂದು ರಜೆ ಘೋಷಿಸಲಾಗಿದೆ.
ನಿನ್ನೆ ಸಂಜೆಯಿಂದ ಉದ್ಘವಿಸಿರುವ ಅಪಾಯಕರ ವಾತಾವರಣವನ್ನು ಗಮನಿಸಿ ತಾಲೂಕು ಆಡಳಿತ ರಜೆ ನೀಡುವ ನಿರ್ಧಾರಕ್ಕೆ ಬಂದಿದೆ.
ಜಿಲ್ಲಾಧಿಕಾರಿ ಡಾ. ಕೆವಿ. ರಾಜೇಂದ್ರ ರವರು ರಜೆಯ ಆದೇಶ ಪ್ರಕಟಿಸಿದ್ದಾರೆ.