ಪನ್ನೆಬೀಡು ಭಗವತಿ ಕ್ಷೇತ್ರದ ನಾಗನ ಕಟ್ಟೆ ಸಂಪೂರ್ಣ ಜಲಾವೃತ

0

 

 

ಕೇರ್ಪಳ ಬೂಡು ಪನ್ನೆಬೀಡು ಶ್ರೀ ಭಗವತಿ ಕ್ಷೇತ್ರದ ನಾಗನಕಟ್ಟೆಯು ನ.ಪಂ.ನಾಮನಿರ್ದೇಶಿತ ಸದಸ್ಯ ಬೂಡು ರಾಧಾಕೃಷ್ಣ ರೈ ಯವರ ತೋಟದೊಳಗಿದ್ದು ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಸಂಪೂರ್ಣ ಕೃಷಿ ತೋಟ ಜಲಾವೃತಗೊಂಡಿದೆ. ಕಟ್ಟೆಯ ಬಳಿ ತೆರಳಲು ಸಾಧ್ಯವಿಲ್ಲದಿರುವ ಕಾರಣದಿಂದ ಇಂದು ಬೆಳಗ್ಗೆ ನಾಗರ ಪಂಚಮಿಯ ಪ್ರಯುಕ್ತ ನಡೆಯಬೇಕಾಗಿದ್ದ ಪೂಜಾ ಕೈಂಕರ್ಯವನ್ನು ಮುಂದೂಡಲಾಗಿದೆ. ಮುಂದಿನ ತಿಂಗಳ ಪಂಚಮಿಯಂದು ವಿಶೇಷ ಪೂಜೆಯನ್ನು ನೆರವೇರಿಸುವುದಾಗಿ ಬೂಡು ರಾಧಾಕೃಷ್ಣ ರೈ ಯವರು ಸುದ್ದಿಗೆ ತಿಳಿಸಿರುತ್ತಾರೆ.