ಯೇನೆಕಲ್ಲು  : ನದಿ ದಡಕ್ಕೆ ಬಂದ ಮೊಸಳೆ ಮತ್ತೆ ನದಿಗೆ

0

 

ಯೇನೆಕಲ್ಲು ಗ್ರಾಮದ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಚ್ಚನಾಯಕ ದೈವಸ್ಥಾನದ ಬಳಿ ಮೊಸಳೆಯೊಂದು ದಡದಿಂದ ನದಿಗೆ ಹೋದ ಘಟನೆ ಇಂದು ನಡೆದಿದೆ.
ಆ. 1ರಂದು ಸಂಜೆ ನದಿ ತುಂಬಿ ಹರಿದಿದ್ದು, ಈ ಸಂದರ್ಭದಲ್ಲಿ ಮೊಸಳೆ ದಡಕ್ಕೆ ಬಂದಿರಬಹುದೆಂದು ಶಂಕಿಸಲಾಗಿದೆ.

ಇವತ್ತು ದೇವಸ್ಥಾನದ ಬಳಿ ಜನ ಸೇರುತ್ತಿದ್ದಂತೆ ಮೊಸಳೆ ನದಿಯ ಕಡೆಗೆ ತೆರಳಿತು. ಇದನ್ನು ಸ್ಥಳೀಯರಾದ ಮನುದೇವ ಪರಮಲೆಯವರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.