ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಾರೆ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಒಕ್ಕೂಟದ ಅಧ್ಯಕ್ಷರಾಗಿ ಹರಿಣಾಕ್ಷಿ ರೈ ಪನ್ನೆ , ಕಾರ್ಯದರ್ಶಿಯಾಗಿ ವೀಣಾ ಮಂಜುನಾಥ್ ಮೂಡಾಯಿತೋಟ ಬೆಳ್ಳಾರೆ, ಉಪಾಧ್ಯಕ್ಷೆಯಾಗಿ ನಂದಿನಿ, ಜತೆಕಾರ್ಯದರ್ಶಿಯಾಗಿ ವೇದಾವತಿ, ಕೋಶಾಧಿಕಾರಿಯಾಗಿ ಚೈತ್ರಾ ಚೀಮುಳ್ಳು ಆಯ್ಕೆಯಾದರು.
ಮುಂದಿನ ಮೂರು ವರ್ಷ ಇವರು ಒಕ್ಕೂಟವನ್ನು ಮುಂದುವರೆಸಲಿದ್ದಾರೆ.