ಜಾಲ್ಸೂರು ಗ್ರಾಮದ ಅರಿಯಡ್ಕ ಶ್ರೀ ದಾಲ್ಸೂರಾಯಿ ದೈವಸ್ಥಾನದ ಬಳಿಯ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಆಚರಣೆಯು ಶ್ರೀ ನಾಗದೇವರಿಗೆ ಹಾಲು, ಸಿಯಾಳಾಭಿಷೇಕದೊಂದಿಗೆ ಆ.2ರಂದು ನಡೆಯಿತು. ಅರ್ಚಕರಾದ ಶ್ರೀರಾಮ್ ಭಟ್ ಪೂಜಾ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ರವೀಂದ್ರ ಗೌಡ ಅರಿಯಡ್ಕ ಮತ್ತು ಭಕ್ತಾಾದಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.