ನಿನ್ನೆ ರಾತ್ರಿ ಹೊತ್ತಿನಲ್ಲಿ ಬಿರುಸಿನ ಮಳೆಯಿಂದ ನೀರಿನ ಮಟ್ಟ ಹೆಚ್ಚಾಗುತ್ತಾ ಇರುವುದನ್ನು ಪೇರಡ್ಕ ಸುತ್ತಮುತ್ತಲಿನ ಮನೆಯವರು ಸುರಕ್ಷಿತ ವಾಗಿರಲು ಮಸೀದಿಯ ಧ್ವನಿವರ್ಧಕದ ಮೂಲಕ ಮಸೀದಿ ಖತೀಬರಾದ ರಿಯಾಝ್ ಫೈಝಿ ಮಧ್ಯರಾತ್ರಿ ಎಚ್ಚರಿಸಿದ ಘಟನೆ ನಡೆದಿದೆ.
ಧ್ವನಿವರ್ಧಕ ಮೂಲಕ ಮಾಹಿತಿ ನೀಡಿದ ಕೆಲವೇ ಕ್ಷಣದಲ್ಲಿ ಗೂನಡ್ಕ ಪರಿಸರದಲ್ಲಿ ಮನೆಗೆ ಮತ್ತು ಪೇರಡ್ಕ ದರ್ಗಾ ಶರೀಫ್ ಹತ್ತಿರದ ಮನೆಗಳಿಗೆ ನೀರು ಬರಲು ಪ್ರಾರಂಭವಾಯಿತು. .ಕೂಡಲೆ ಪರಿಸರದ ಜನರು ಎಚ್ಚೆತ್ತುಕೊಂಡು ಜನರ ರಕ್ಷಣೆಗೆ ಧಾವಿಸಿದರು.ಸುಳ್ಯ ಅಗ್ನಿ ಶಾಮಕದಳ ವಿವಿಧ ಸಂಘ ಸಂಸ್ಥೆಯ ಕಾರ್ಯಕರ್ತರು ನೆರವಾಗಲು ಸಹಕರಿಸಿದರು.