ನೆರೆ ಹಾವಳಿಯಿಂದಾಗಿ ಗೂನಡ್ಕದ ಪುನರ್ವಸತಿ ಕೇಂದ್ರದಲ್ಲಿರುವವರಿಗೆ ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಎನ್. ಸಿ.ಸಿ. ಘಟಕದ ವತಿಯಿಂದ ಅಗತ್ಯ ವಸ್ತುಗಳನ್ನು ನೀಡಲಾಯಿತು. ಹಾಗೂ ಅವರ ಮನೆಗಳಿಗೆ ತೆರಳಿ ಕೆಡೆಟ್ ಗಳು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಆತ್ಮಸ್ಥೈರ್ಯ ತುಂಬಿದರು .ಎನ್.ಸಿ.ಸಿ. ಅಧಿಕಾರಿ ಲೆ. ಸೀತಾರಾಮ ಎಂ. ಡಿ., ಹಾಗೂ ಉಪನ್ಯಾಸಕರಾದ ವಿಷ್ಣು ಪ್ರಶಾಂತ್,ಹಾಗೂ ಹರಿಪ್ರಸಾದ್ ಅತ್ಯಾಡಿ ಜೊತೆಗಿದ್ದು ಸಹಕರಿಸಿದರು.