ಕುಸುಮ ಬಾಳೆಗುಡ್ಡೆಯವರಿಗೆ ಶ್ರದ್ಧಾಂಜಲಿ ಸಭೆ

0

ಜು. 23ರಂದು ನಿಧನರಾದ ಕುಸುಮ ಬಾಳೆಗುಡ್ಡೆಯವರಿಗೆ ಶ್ರದ್ಧಾಂಜಲಿ ಸಭೆ ಆ. 4ರಂದು ಮೃತರ ಸ್ವಗೃಹ ಬಾಳೆಗುಡ್ಡೆಯಲ್ಲಿ ನಡೆಯಿತು. ಬ್ಯಾಂಕ್ ಆಫ್ ಬರೋಡದ ನಿವೃತ್ತ ಉದ್ಯೋಗಿ ಬಿ. ನಾರಾಯಣ ನಾಯ್ಕ ಬಾಳೆಗುಡ್ಡೆ, ಬೀಡಿಗೆ, ಪುತ್ತೂರು ಮರಾಟಿ ಸಂಘದ ಅಧ್ಯಕ್ಷ ರಾಮಚಂದ್ರ ನಾಯ್ಕ, ನಿವೃತ್ತ ಅಧ್ಯಾಪಕರಾದ ಕೆ. ಬಿ. ನಾಯ್ಕ ಪೋನಡ್ಕ ಮೃತರಿಗೆ ನುಡಿ ನಮನ ಸಲ್ಲಿಸಿದರು.

ಮೃತರ ತಂದೆ ಸುಳ್ಯ ಲ್ಯಾಂಪ್ ಸಹಕಾರ ಸಂಘದ ಉಪಾಧ್ಯಕ್ಷ ಬಿ. ಕುಂಞಣ್ಣ ನಾಯ್ಕ ಬಾಳೆಗುಡ್ಡೆ, ಸಹೋದರರಾದ ಕಳಂಜ ಬಾಳಿಲ ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕ ಶುಭಕುಮಾರ್ ಬಾಳೆಗುಡ್ಡೆ, ಬಿ. ಜಯಕುಮಾರ್ ಬಾಳೆಗುಡ್ಡೆ ಮತ್ತು ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಮೌನ ಪ್ರಾರ್ಥನೆಯ ಬಳಿಕ ಮೃತರ ಭಾವಚಿತ್ರಕ್ಕೆ ಪುಪ್ಷ ನಮನ ಸಲ್ಲಿಸಿದರು.