ವಿಶ್ವನಾಥ್ ಕೆ. ಬಿ. ಕುಕ್ಕೇಟಿ ಎಸ್. ಪಿ. ಆಗಿ ಮುಂಭಡ್ತಿ

0

 

 

ಕರ್ನಾಟಕ ಪೋಲೀಸ್ ಇಲಾಖೆ ಗುಪ್ತಚರ ಇಲಾಖೆಯಲ್ಲಿ ಡಿ ವೈ ಎಸ್. ಪಿ. ಆಗಿ ಸೇವೆ ಸಲ್ಲಿಸುತ್ತಿದ್ದ ವಿಶ್ವನಾಥ ಕೆ. ಬಿ. ಕುಕ್ಕೇಟಿ ಇವರಿಗೆ ಪೋಲೀಸ್ ಅಧೀಕ್ಷಕ( ಎಸ್.ಪಿ.)ರಾಗಿ ಮುಂಭಡ್ತಿ ನೀಡಿ ಕರ್ನಾಟಕ ಪೋಲೀಸ್ ಮಹಾನಿರ್ದೇಶಕರು ಆದೇಶ ನೀಡಿದ್ದಾರೆ. ಅವರನ್ನು ಲೋಕಾಯುಕ್ತ ಎಸ್.ಪಿ. ಆಗಿ ನೇಮಕ ಮಾಡಲಾಗಿದೆ.

ಮಂಡೆಕೋಲು ಗ್ರಾಮದ ಕುಕ್ಕೇಟಿ ಮನೆತನದ ಬೋಜಪ್ಪ ಗೌಡರ ಪುತ್ರರಾದ ಇವರು ಪ್ರಸ್ತುತ ಕೊಡಗಿನ ಸೋಮವಾರಪೇಟೆಯಲ್ಲಿ ನೆಲೆಸಿದ್ದಾರೆ. ಇವರು ವೃತ್ತಿಯ ಆರಂಭದ ದಿನಗಳಲ್ಲಿ ಸುಳ್ಯ ಪೋಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಡಿವೈಎಸ್ಪಿ ಆಗಿ ಭಡ್ತಿ ಹೊಂದಿ ಬೆಂಗಳೂರು, ಮಂಡ್ಯ, ತುರುವೆಕೆರೆ, ತುಮಕೂರು ಮುಂತಾದ ಕಡೆ ಸೇವೆ ಸಲ್ಲಿಸಿದ್ದಾರೆ.