ಸುಬ್ರಹ್ಮಣ್ಯ :ಚದುರಂಗ ಆಟ ಆಡೋಣ ಅಭಿಯಾನ

0

 

ಸುಬ್ರಮಣ್ಯ ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ದಲ್ಲಿ ಆ. 4 ರಂದು ಸರಕಾರದ ಯೋಜನೆಯ ಪ್ರಕಾರ ಓದುವ ಬೆಳಕು ಕಾರ್ಯಕ್ರಮದ ಅಂಗವಾಗಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಯಿತು.

 ಈ ಸಂದರ್ಭದಲ್ಲಿ ಗ್ರಾಂ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ, ಉಪಾಧ್ಯಕ್ಷೆ ಸವಿತಾ ಭಟ್, ಸೇವಾ ಪ್ರತಿನಿಧಿಯವರು ಮಕ್ಕಳ ಪೋಷಕರು, ಗ್ರಂಥಾಲಯ ಮೇಲ್ವಿಚಾರಕರು ಉಪಸ್ಥಿರಿದ್ದರು. ತೀರ್ಪುಗಾರರಾಗಿ ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ಭಟ್ ರವರು ಸ್ಪರ್ಧೆಯನ್ನು ನಡೆಸಿಕೊಟ್ಟರು
ಜಿತೇಶ್ ಕುಮಾರ್ ಪ್ರಥಮ,
ಅಭಿಜ್ಞ ದ್ವಿತೀಯ,
ಮನ್ವಿತ್ ಸತ್ಯ ತೃತೀಯ ಸ್ಥಾನ ಪಡೆದರು.