ನಾಲ್ಕೂರು ಗ್ರಾಮದ ಮರಕತ ಯೋಗೀಶ್ ರವರ ಕೊಟ್ಟಿಗೆಗೆ ಗುಡ್ಡ ಜರಿದು ಗೋಡೆ, ಮಾಡು ಹಾನಿಯಾಗಿ ನಷ್ಟ ಉಂಟಾಗಿದೆ.
ಮನೆಗೆ ಹೋಗುವ ರಸ್ತೆ ತೋಟ ಸಂಪೂರ್ಣ ಜಲಾವೃತಗೊಂಡಿದ್ದು, ಮನೆಯ ಸಮೀಪ ನೀರು ಹರಿದು ಬರುತ್ತಿದ್ದು , ಪಕ್ಕದ ಮನೆಯಲ್ಲಿ ವಸತಿ ಪಡೆಯುತ್ತಿದ್ದಾರೆ
ವಿಪರೀತ ಮಳೆ ನೀರಿನ ಕಾರಣ ದಿಂದಾಗಿ ತೋಟದ ಕೃಷಿಯು ನಷ್ಟ ಸಂಭವಿಸಿದ್ದು ಮನೆಯ ರಸ್ತೆಯೂ ಬಿರುಕು ಬಿಟ್ಟಿದೆ. ಸೂಕ್ತ ಪರಿಹಾರ ಒದಗಿಸ ಬೇಕೆಂದು ಮನೆಯವರು ಕೇಳಿಕೊಂಡಿದ್ದಾರೆ.