ಆಲೆಟ್ಟಿ : ಸುದ್ದಿ ಸ್ವಾತಂತ್ರ್ಯ ರಥಕ್ಕೆ ಸ್ವಾಗತ

0

ಆಲೆಟ್ಟಿ ಪೇಟೆಯಲ್ಲಿ ಸುದ್ದಿ ಸ್ವಾತಂತ್ರ್ಯ ರಥವು ಆಗಮಿಸಿದಾಗ ಗ್ರಾಮಸ್ಥರು ಸ್ವಾಗತಿಸಿದರು.
ಈ ಬಾರಿಯ 75ನೇ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಪ್ರಯುಕ್ತ ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕೆಂಬ ಸಂದೇಶವನ್ನು ಸಾರುವ ಸಲುವಾಗಿ ಸುದ್ದಿ ಸ್ವಾತಂತ್ರ್ಯ ರಥವು ಗ್ರಾಮಗ್ರಾಮಗಳಲ್ಲಿ ಸಂಚರಿಸುತ್ತಿದೆ.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಮಾತನಾಡಿದರು. ಗ್ರಾ.ಪಂ.ಮಾಜಿ ಸದಸ್ಯ ಹರೀಶ್ ಕೊಯಿಂಗಾಜೆ ,ಸದಸ್ಯೆ ವೀಣಾ ವಸಂತ,ಶುಭಕರ ಅರ್ನೋಜಿ,ಜಲಜಾಕ್ಷಿ,ಸುಕುಮಾರ,ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುದ್ದಿ ಪತ್ರಿಕೆಯ ರಮೇಶ್ ನೀರಬಿದಿರೆ, ಶಿವಪ್ರಸಾದ್ ಕೇರ್ಪಳ,ರೇಖಾ ಸುಭಾಸ್,ಕಾರ್ತಿಕ್ ಉಪಸ್ಥಿತರಿದ್ದರು.