ಆಲೆಟ್ಟಿ ದೇವಸ್ಥಾನದ ವಠಾರದಲ್ಲಿ ಸುದ್ದಿ ಸ್ವಾತಂತ್ರ್ಯ ರಥಕ್ಕೆ ಸ್ವಾಗತ

0

 

ಆಲೆಟ್ಟಿ ದೇವಸ್ಥಾನದ ವಠಾರದಲ್ಲಿ ಸುದ್ದಿ ಸ್ವಾತಂತ್ರ್ಯ ರಥವು ಆಗಮಿಸಿದಾಗ ಗ್ರಾಮಸ್ಥರು ಸ್ವಾಗತಿಸಿದರು.
ಈ ಬಾರಿಯ 75ನೇ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಪ್ರಯುಕ್ತ ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕೆಂಬ ಸಂದೇಶವನ್ನು ಸಾರುವ ಸಲುವಾಗಿ ಸುದ್ದಿ ಸ್ವಾತಂತ್ರ್ಯ ರಥವು ಗ್ರಾಮಗ್ರಾಮಗಳಲ್ಲಿ ಸಂಚರಿಸುತ್ತಿದೆ.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಮಾತನಾಡಿದರು. ದೇವಸ್ಥಾನದ ಪ್ರಮುಖರಾದ ಎನ್.ಎ.ರಾಮಚಂದ್ರ,ಪುರುಷೋತ್ತಮ ಕೋಲ್ಚಾರ್, ಪ್ರಸನ್ನ ಬಡ್ಡಡ್ಕ,ಜಯಪ್ರಕಾಶ್ ಕುಂಚಡ್ಕ,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ರಾಮಚಂದ್ರ ಆಲೆಟ್ಟಿ,ಸತೀಶ್ ಕುಂಭಕ್ಕೋಡು,ಅಚ್ಚುತ ಮಣಿಯಾಣಿ ಆಲೆಟ್ಟಿ,ಹರಿಪ್ರಸಾದ್ ಗಬ್ಬಲ್ಕಜೆ,ಹರಿಪ್ರಸಾದ್ ಕಾಪುಮಲೆ,ಲಕ್ಷ್ಮಣ ಗೌಡ ಉಳಿಯ, ಮಮತ ನಾರ್ಕೋಡು,ಎಸ್.ಎನ್‌.ಜಯರಾಮ,ನವೀನ್ ಕುಮಾರ್ ಆಲೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುದ್ದಿ ಪತ್ರಿಕೆಯ ರಮೇಶ್ ನೀರಬಿದಿರೆ, ಶಿವಪ್ರಸಾದ್ ಕೇರ್ಪಳ,ರೇಖಾ ಸುಭಾಸ್,ಕಾರ್ತಿಕ್ ಉಪಸ್ಥಿತರಿದ್ದರು.