ಬಾಳುಗೋಡು: ಕೊತ್ನಡ್ಕ, ಉಪ್ಪುಕಳದ 60 ಕುಟುಂಬಕ್ಕೆ ಫುಡ್ ಕಿಟ್ ವಿತರಣೆ

0

 

ಸಿದ್ದನಗುಡ್ಡೆಯಲ್ಲಿ ಬರೆ ಜರಿದು ಸಂಪರ್ಕ ಕಳೆದುಕೊಂಡಿರುವ ಬಾಳುಗೋಡು ಗ್ರಾಮದ ಕೊತ್ನಡ್ಕ, ಉಪ್ಪುಕಳದ ಸುಮಾರು 60 ಮನೆಗಳಿಗೆ ಆ.4 ರಂದು ಸರ್ಕಾರ ವತಿಯಿಂದ ಫುಡ್ ಕಿಟ್ ವಿತರಣೆ ಮಾಡಲಾಯಿತು.

ಎಸ್ ಡಿ ಆರ್ ಎಫ್ ನಿಧಿಯಿಂದ ಇದನ್ನು ನೀಡಲಾಗುತ್ತಿದೆ. ಹರಿಹರದ ಪಿ ಡಿ ಒ ಪುರುಷೋತ್ತಮ ಮಣಿಯಾನ, ಪಂಚಾಯತ್ ಸಿಬ್ಬಂದಿ ಪ್ರೀಯ ಕಲ್ಲೇಮಠ, ನೊಡೆಲ್ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ರವಿಕುಮಾರ್ ಸಿ ಆರ್, ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು, ಉಪಾಧ್ಯಕ್ಷ ವಿಜಯ ಅಂಙಣ, ಸದಸ್ಯ ದಿವಾಕರ ಮುಂಡಾಜೆ, ಅಜಯ್ ಪೊಯ್ಯೆಮಜಲು, ರಾಧಾಕೃಷ್ಣ ಕಟ್ಟೆಮನೆ ಮತ್ತಿತರರು ಸಹಕರಿಸಿದರು.