ವೆಂಕಟರಮಣ ಸೊಸೈಟಿ ವತಿಯಿಂದ ನಿರ್ದೇಶಕರಾದ ಎ.ವಿ.ತೀರ್ಥರಾಮ ಮತ್ತು ಪಿ.ಎಸ್.ಗಂಗಾಧರ್ ರಿಗೆ ಸನ್ಮಾನ

0

 

ಶ್ರೀ ವೆಂಕಟರಮಣ ಕ್ರಿಕೆಟ್ ಕೋ ಆಪರೇಟಿವ್ ಸೊಸೈಟಿ ಸುಳ್ಯ ಇದರ ಆಡಳಿತ ಮಂಡಳಿ ಸಭೆಯು ಆ.6 ರಂದು ಸಂಘದ ಸಭಾಭವನದಲ್ಲಿ ಜರಗಿತು. ಸಭೆಯಲ್ಲಿ ಸಂಘದ ನಿರ್ದೇಶಕರಾಗಿದ್ದು, ಸುಳ್ಯ ಟಿ.ಎ.ಪಿ.ಸಿ.ಎಂ.ಎಸ್. ಉಪಾಧ್ಯಕ್ಷರಾಗಿ ಆಯ್ಕೆಯಾದ ಪಿ.ಎಸ್.ಗಂಗಾಧರ್ ಮತ್ತು ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಎ.ವಿ.ತೀರ್ಥರಾಮರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

 

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪಿ.ಸಿ.ಜಯರಾಮ್,ಉಪಾಧ್ಯಕ್ಷ ಮೋಹನರಾಮ್ ಸುಳ್ಳಿ, ನಿರ್ದೇಶಕರಾದ ಜಾಕೆ ಸದಾನಂದ,ನಿತ್ಯಾನಂದ ಮುಂಡೋಡಿ,ಕೆ.ಸಿ.ನಾರಾಯಣ ಗೌಡ,ಚಂದ್ರಾ ಕೋಲ್ಚಾರ್, ದಾಮೋದರ ನಾರ್ಕೋಡು,ದಿನೇಶ್ ಮಡಪ್ಪಾಡಿ,ಕೆ.ಸಿ‌.ಸದಾನಂದ,ಹೇಮಚಂದ್ರ, ಮಹಾತ್ಮಗಾಂಧಿ ಮಲ್ನಾಡ್ ಶಾಲೆಯ ಸಂಚಾಲಕ ದೊಡ್ಡಣ್ಣ ಬರೆಮೇಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್,ಜಿ.ಎಂ.ಚಂದ್ರಶೇಖರ ಮೇರ್ಕಜೆ, ಸಿಬ್ಬಂದಿಗಳಾದ ಮನೋಜ್ ಪಾನತ್ತಿಲ,ಕಾರ್ತಿಕ್ ಹಾಗೂ ಸುರೇಶ್ ಉಪಸ್ಥಿತರಿದ್ದರು.