ಸಂಪಾಜೆ : ಸೇತುವೆಯಲ್ಲಿ ಬಿದ್ದಿದ್ದ ಕಸಗಳ ತೆರವು

0

 

ಸಂಪಾಜೆ ಗ್ರಾಮದಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಗ್ರಾಮದ ಹಲವು ಸೇತುವೆಗಳಲ್ಲಿ ಮರ ಹಾಗೂ ಬಿದಿರು ಕಾಡು ತುಂಬಿ ಬ್ಲಾಕ್ ಆಗಿದ್ದು, ಅದನ್ನು ತೆರವುಗೊಳಿಸುವ ಕಾರ್ಯ ನಡೆಯಿತು. ಎಸ್ ಎಸ್ ಎಫ್ ಸಂಘಟನೆಯ ಕಾರ್ಯಕರ್ತರು ತೆರವು ಕಾರ್ಯದಲ್ಲಿ ಸಹಕರಿಸಿದರು.


ರಾಜೇಶ್ ವೆಲ್ಡಿಂಗ್ ಶಾಪ್ ಕಲ್ಲುಗುಂಡಿ ಹಾಗೂ ಉಮ್ಮರ್ ಗುಲ್ಮಕಜೆ ಮೆಷಿನ್ ಮೂಲಕ ಮರ ಕತ್ತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ, ಸದಸ್ಯರಾದ ಎಸ್. ಕೆ. ಹನೀಫ್, ಜಗದೀಶ್ ರೈ, ಅಬೂಸಾಲಿ ಪಿ. ಕೆ. ಉಪಸ್ಥಿತರಿದ್ದರು.