ಪ್ರವೀಣ್ ನೆಟ್ಟಾರುರವರಿಗೆ ಶ್ರದ್ಧಾಂಜಲಿ ಸಭೆ

0

 

 

ಜು. 26ರಂದು ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬೆಳ್ಳಾರೆ ಅಕ್ಷಯ ಚಿಕನ್ ಸೆಂಟರ್ ನ ಮಾಲಕ ಪ್ರವೀಣ್ ನೆಟ್ಟಾರುರವರಿಗೆ ಶ್ರದ್ಧಾಂಜಲಿ ಸಭೆ ಆ. 6ರಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಅವರ ಉತ್ತರಕ್ರಿಯೆಯ ಸಂದರ್ಭದಲ್ಲಿ ನಡೆಯಿತು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ಇಡ್ಕಿದು ಗ್ರಾ.ಪಂ. ಅಧ್ಯಕ್ಷ ಸುಧೀರ್ ಶೆಟ್ಟಿ ಮೃತರ ಬಗ್ಗೆ ಮಾತನಾಡಿದರು. ಮೃತರ ಪತ್ನಿ ಶ್ರೀಮತಿ ನೂತನ ಪ್ರವೀಣ್, ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ, ಸಹೋದರಿಯರಾದ ಶ್ರೀಮತಿ ರೋಹಿಣಿ ಶಿವರಾಮ ಕತ್ರಿಬೈಲು, ಹರಿಣಿ, ಶ್ರೀಮತಿ ನಳಿನಿ ಸತೀಶ್ ಕಡಂಬಳಿಕೆ, ಸ್ಥಳೀಯ ಮುಖಂಡರಾದ ಜಯಂತ ನಡುಬೈಲು, ಅರುಣ್ ಶಂಕರ್ ಬರೆಮೇಲು, ರವಿ ಚಿಲಿಂಬಿ, ಎಸ್.ಬಿ. ಜಯರಾಮ ರೈ ಬಳಜ್ಜ, ಸಹಜ್ ರೈ ಬಳಜ್ಜ, ರಾಕೇಶ್ ರೈ ಕೆಡೆಂಜಿ, ಶ್ರೀನಾಥ್ ರೈ ಬಾಳಿಲ, ಪದ್ಮನಾಭ ಶೆಟ್ಟಿ ಪೆರುವಾಜೆ ಸೇರಿದಂತೆ ಪ್ರವೀಣ್ ನೆಟ್ಟಾರುರವರ ಕುಟುಂಬಸ್ಥರು, ಬಂಧು ಮಿತ್ರರು ಭಾಗವಹಿಸಿದ್ದರು.