ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದಿಂದ ಸಹಾಯಧನ ವಿತರಣೆ

0

 

ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದಿಂದ ಸಹಾಯಧನ ವಿತರಣೆ ಮಾಡಲಾಯಿತು.

ಜು ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ಗಣೇಶ್ ಆಚಾರ್ಯರ ಮನೆ ಮತ್ತು ಗ್ಯಾರೇಜ್, ಕಮಲಾಕ್ಷ ಕೆ ಸಿ ,ವಿನಯ್ ಕುಮಾರ್ ಎಮ್ ಸಿ,ರಾಜೇಶ್ ಕಲ್ಲುಗುಂಡಿ ರವರ ಗ್ಯಾರೇಜ್ ಗಳಿಗೆ ನೀರು ನುಗ್ಗಿದ ಪರಿಣಾಮವಾಗಿ ಅಪಾರ ಹಾನಿಯಾಗಿತ್ತು, ಇದರಿಂದಾಗಿ ಸಂಘದ ಸದಸ್ಯರು ಎಲ್ಲಾ ಒಟ್ಟಾಗಿ ಸೇರಿ ಸಂಗ್ರಹಿಸಿದ ಸಹಾಯ ಧನವನ್ನು ಆ 7 ರಂದು ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದವತಿಯಿಂದ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯರಾದ ರಮೇಶ್ ಹುಲ್ಲು ಬೆಂಕಿ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷರು,ಕಾರ್ಯದರ್ಶಿ, ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.