ಕೊಟ್ಟಿಗೆ ಯಲ್ಲಿ ದೈನಂದಿನ ಕೆಲಸ ಮಾಡುತ್ತಿದ್ದವರು ಪ್ರಾಣಪಾಯದಿಂದ ಪಾರು
ಮರ್ಕಂಜ ಗ್ರಾಮದ ಬಾಣೂರು ಎಂಬಲ್ಲಿ ಕೊಟ್ಟಿಗೆಯೊಂದು ನೆಲಸಮವಾಗಿ ಅದರೊಳಗಿದ್ದ ದೈನಂದಿನ ಕೆಲಸ ಮಾಡಿಕೊಂಡಿದ್ದ ಮನೆಯ ಯಜಮಾನ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರದ ಘಟನೆ ಇಂದು ವರದಿಯಾಗಿದೆ.
ಮರ್ಕಂಜ ಗ್ರಾಮದ ಬಾಣೂರು ಜಯಾನಂದ ಎಂಬವರು ಕೊಟ್ಟಿಗೆಯಲ್ಲಿ ದೈನಂದಿನ ಕೆಲಸದಲ್ಲಿ ನಿರತರಾಗಿದ್ದ ವೇಳೆ ಮಧ್ಯಾಹ್ನ ಮಾಡಿನ ಹಂಚು ಬೀಳತೊಡಗಿತು. ಅಪಾಯ ಅರಿತ ಜಯಾನಂದ ರವರು ಕೊಟ್ಟಿಗೆಯಿಂದ ಹೊರಬಂದರೆಂದೂ ಆ ಸಂದರ್ಭ ಕೊಟ್ಟಿಗೆ ಒಂದೊಮ್ಮೆಲೆ ಕುಸಿದು ಬಿತ್ತೆನ್ನಲಾಗಿದೆ. ಕೊಟ್ಟಿಗೆಯಲ್ಲಿದಗದ ವಸ್ತುಗಳಿಗೆ ಹಾನಿಯಾಗಿದೆ. ಕೊಟ್ಟಿಗೆಯ ಬಳಿ ಹಟ್ಟಿಯಲ್ಲಿದ್ದ ಹಸುಗಳುಗಳನ್ನು ತೋಟ ದಲ್ಲಿ ಕಟ್ಟಿದ ಕಾರಣ ಮೂಖ ಪ್ರಾಣಿಗಳು ಪ್ರಾಣಪಾಯದಿಂದ ಪಾರಾಗಿದೆ.