ಕಲ್ಲುಗುಂಡಿಯಲ್ಲಿ ಎಸ್ ಕೆ ಎಸ್ ಎಸ್ ಎಫ್ ಯುವಕರ ಶ್ರಮದಾನ

0

 

ಕಲ್ಲುಗುಂಡಿಯ ಕೂಲಿಶೆಡ್ ಎಂಬಲ್ಲಿ ಇಡೀ ಪೇಟೆಯೇ ಜಲಾವೃತ್ತಗೊಂಡು ಅಂಗಡಿ ಹಾಗೂ ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟವಾಗಿತ್ತು. ಇದೀಗ ಕೆಸರು ನೀರು ನುಗ್ಗಿದ ಅಂಗಡಿಗಳನ್ನು, ರಾಷ್ಟ್ರೀಯ ಹೆದ್ದಾರಿ ಹಾಗೂ ಮನೆಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಭಾನುವಾರ ನಡೆಸಲಾಯಿತು.

ಇಪ್ಪತ್ತಕ್ಕೂ ಅಧಿಕ ಮಂದಿ ಎಸ್‌ಕೆಎಸ್‌ಎಸ್‌ಎಫ್‌ನ ಯುವಕರು ಉತ್ಸಾಹದಿಂದ ಈ ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡರು.
ಸಂಪಾಜೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಜಿ.ಕೆ.ಹಮೀದ್‌, ಗ್ರಾಮ ಪಂಚಾಯತ್ ಸದಸ್ಯ ಎಸ್‌.ಕೆ.ಹನೀಫ್‌, ಜಗದೀಶ್ ರೈ ಸಂಪಾಜೆ, ಸಂಪಾಜೆ ಮಸೀದಿ ಅಧ್ಯಕ್ಷ ತಾಜ್‌ ಮಹಮ್ಮದ್‌, ಕಲ್ಲುಗುಂಡಿ ಮಸೀದಿ ಅಧ್ಯಕ್ಷ ಅಬ್ಬಾಸ್‌ ಸಂಟ್ಯಾರ್‌ ಹಸೈನಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here