ಮದೆನಾಡಿನಲ್ಲಿ ಗುಡ್ಡೆ ಕುಸಿತದ ಭೀತಿ ಹಿನ್ನಲೆ : ಸಂಚಾರ ರದ್ದು  ಆದೇಶ

0

 

 

 

ಸಂಪಾಜೆ ಗೇಟ್ ಸಂಪೂರ್ಣ ಬಂದ್

ಮದೆನಾಡು ಬಳಿ ಹೆದ್ದಾರಿಯಲ್ಲಿ ಮಣ್ಣು ಕುಸಿತದ ಪರಿಣಾಮ ಮಡಿಕೇರಿ ಮಂಗಳೂರು ರಸ್ತೆ ಸಂಚಾರವನ್ನು ಇಂದು ರಾತ್ರಿ 9 ಗಂಟೆಯಿಂದ ನಾಳೆ ಬೆಳಗ್ಗೆ 6.30 ಗಂಟೆವರೆಗೂ ಎಲ್ಲಾ ವಾಹನ ಸಂಚಾರಕ್ಕೆ ಬಂದ್ ಮಾಡಿ ಕೊಡಗು ಜಿಲ್ಲಾಧಿಕಾರಿ ಆದೇಶ ನೀಡಿದ್ದು, ಈ ಹಿನ್ನಲೆಯಲ್ಲಿ ಸಂಪಾಜೆ ಘಾಟ್ ರಸ್ತೆ ಬಂದ್ ಆಗಿದೆ.


ಸಂಪಾಜೆ ಗೇಟ್ ಬಳಿ ಎಲ್ಲಾ ವಾಹನಗಳನ್ನು ನಿಲ್ಲಿಸಲಾಗಿದ್ದು, ಗೇಟ್ ಗೆ ರಿಬ್ಬನ್ ಕಟ್ಟಿ ಮುಂದೆ ವಾಹನಗಳು ಸಾಗದಂತೆ ಗೇಟ್ ಬಂದ್ ಮಾಡಲಾಗಿದೆ ಎಂದು ತಿಳಿದುಬಂದಿದೆ.