ಆಕಸ್ಮಿಕ ವಿದ್ಯುತ್ ದುರ್ಘಟನೆ : ದ.ಕ.ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸಹಾಯಧನ ವಿತರಣೆ

0

 

ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕೂಲಿಶೆಡ್ಡಿನಲ್ಲಿ

ಆಕಸ್ಮಿಕ ವಿದ್ಯುತ್ ಘಟನೆ ಸಂಭವಿಸಿದ್ದು ಹಾನಿಗೀಡಾದ ಸಂಘದ ಸದಸ್ಯರಾದ ಕಟ್ಟಡ ಮಾಲೀಕ ಮಹಮ್ಮದ್ ಕುಂಞಿ ಹಾಗೂ ಟೈಯರ್ ಅಂಗಡಿಯ ಮಾಲಕರಾದ ಲಿಗೋರಿ ಡಿಸೋಜಾ ದಂಡೆಕಜೆ ಇವರಿಗೆ ಸಂಪಾಜೆ ಸಹಕಾರಿ ಸಂಘದ ವತಿಯಿಂದ ಆರ್ಥಿಕ ಸಹಾಯವನ್ನು ಆಗಸ್ಟ್ ಒಂದರಂದು ಸಂಘದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ವಿತರಿಸಲಾಯಿತು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ, ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್, ಎಲ್ಲಾ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.