ಗುತ್ತಿಗಾರು: ಅಮರ ಸಂಜೀವಿನಿ ಒಕ್ಕೂಟ ದಿಂದ 1500 ಧ್ವಜ

0

 

ಗ್ರಾ.ಪಂ ವತಿಯಿಂದ ಧ್ವಜ ಹಸ್ತಾಂತರ

‘ ಹರ್ ಘರ್ ತಿರಂಗ ‘ ಆಜಾದಿ ಕಿ ಅಮೃತ ಮಹೋತ್ಸವ ಅಂಗವಾಗಿ ಪ್ರತಿ ಮನೆ ಮನೆಗೂ ಧ್ವಜ ಹಂಚುವ ಮುಖಾಂತರ ಪ್ರತಿ ಮನೆಯಲ್ಲು ಆಗಸ್ಟ್ 13ರಿಂದ 15ರವರೆಗೆ ದ್ವಜ ಹಾರಿಸಿ ರಾಷ್ಟ್ರದ ಹಬ್ಬವನ್ನು ಆಚರಿಸುವ ಸಲುವಾಗಿ ಜಿಲ್ಲಾಡಳಿತದ ಸುಚನೆಯಂತೆ ಅಮರ ಸಂಜೀವಿನಿ ಒಕ್ಕೂಟ ದಿಂದ 1500 ದ್ವಜವನ್ನು ಒಕ್ಕೂಟ ಅಧ್ಯಕ್ಷೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಅಧ್ಯಕ್ಷರಿಗೆ ಆ.8 ರಂದು
ಹಸ್ತಾಂತರಿಸಿದರು.


ಪಂಚಾಯತ್ ವತಿಯಿಂದ ಆ.9 ರಂದು ಧ್ವಜ ಬಿಡುಗಡೆ ಮಾಡಿ ಪ್ರತೀ ವಾರ್ಡ್ ಸದಸ್ಯರಿಗೆ ಧ್ವಜ ನೀಡಲಾಗಿದ್ದು ರಾಷ್ಟ್ರ ಧ್ವಜವನ್ನು ಪಡಕೊಂಡು ತಮ್ಮ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಸಿ ರಾಷ್ಟ್ರದ ಘನತೆಯನ್ನು ಕಾಪಾಡುವಂತೆ ವಿನಂತಿಸಲಾಗಿದೆ.