ಸುಬ್ರಹ್ಮಣ್ಯ :3000 ಧ್ವಜ ಹಾರಿಸಲು ಸಿದ್ದ

0

 

ಗ್ರಾ.ಪಂ ಸದಸ್ಯರಿಗೆ ಹಂಚಿಕೆ ಉಸ್ತುವಾರಿ

‘ ಹರ್ ಘರ್ ತಿರಂಗ ‘ ಆಜಾದಿ ಕಿ ಅಮೃತ ಮಹೋತ್ಸವ ಅಂಗವಾಗಿ ಪ್ರತಿ ಮನೆ ಮನೆಗೂ ಧ್ವಜ ಹಂಚುವ ಮುಖಾಂತರ ಪ್ರತಿ ಮನೆಯಲ್ಲು ಆಗಸ್ಟ್ 13ರಿಂದ 15ರವರೆಗೆ ಧ್ವಜ ಹಾರಿಸಿ ರಾಷ್ಟ್ರದ ಹಬ್ಬವನ್ನು ಆಚರಿಸುವ ಉದ್ದೇಶದಿಂದ ಸಂಜೀವಿನಿ ಒಕ್ಕೂಟ ಸಹಕಾರದಿಂದ 3000 ಧ್ವಜವನ್ನು ಸಿದ್ದಪಡಿಸಲಾಗಿದೆ. ಅದನ್ನು ಇಂದು ಗ್ರಾ.ಪಂ ಸದಸ್ಯರಿಗೆ ಮತ್ತು ಸ್ಥಳೀಯರಿಗೆ ವಿತರಿಸಲಾಯಿತು. ಗ್ರಾ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ, ಗ್ರಾ.ಪಂ ಕಾರ್ಯದರ್ಶಿ ಮೋನಪ್ಪ ಸುಬ್ರಹ್ಮಣ್ಯ, ಗ್ರಾ.ಪಂ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.